Sunday, June 27, 2010



ಹತ್ಯೆ "ಮರ್ಯಾದೆ" ತಂದೀತೆ...?

"ಜೀವ ತೆಗೆದೇವು, ಜಾತಿ ಬಿಡೆವು" ಎಂಬ ಕ್ರೂರ ಸಂದೇಶದೊಂದಿಗೆ ಅಮಾನವೀಯತೆಯನ್ನು ಜಗತ್ತಿಗೆ ಸಾರ ಹೊರಟಿರುವ ಜೀವಿಗಳು, ಹೆತ್ತ ಮಕ್ಕಳನ್ನೇ ಹತ್ಯೆ ಮಾಡೋ ಮೂಢಾಂಧರು, ಪ್ರಪಂಚ ಕಂಡು ಕೇಳರಿಯದ ಯಾವುದೋ ಹಿಂದುಳಿದ ಅನಾಗರೀಕ ಪ್ರದೇಶದವರಲ್ಲಾ....ಶಾಂತಿಯ ಬೀಡೆನಿಸಿರುವ ಭವ್ಯ ಬಾರತ ಮಾತೆಯ
ವೀರಪುತ್ರರು. ಹರಿಯಾಣ, ರಾಜಸ್ತಾನ್, ಉತ್ತರ ಪ್ರದೇಶ, ಜಾರ್ಖಂಡ್,
ಮಧ್ಯಪ್ರದೇಶ, ಪಂಜಾಬ್, ಹೀಗೆ ಉತ್ತರ ಭಾರತದ ಒಟ್ಟು ಏಳು ಜಿಲ್ಲೆಗಳಲ್ಲಿ ಸರ್ವೇ ಸಾಮಾನ್ಯವಾಗಿರುವ , ದಿನ ನಿತ್ಯದ ಚಟುವಟಿಕೆಯಾಗಿರುವ "ಮರ್ಯಾದ ಹತ್ಯೆ" ತಾಲೀಬಾನಿನ ಕಠೋರ ನ್ಯಾಧೀಕರಣಕ್ಕೇ ಸಡ್ಡು ಹೊಡೆಯುವಂತಿದೆ. 'ಖಾಫ್ ಪಂಚಾಯ್ತಿ' ಅನ್ನೋ ಬೂಟಾಟಿಕೆಯ ನ್ಯಾಯಸ್ಥಾನದಲ್ಲಿ ಆಗ ತಾನೇ ನವ ಜೀವನಕ್ಕೆ ಕಾಲಿಡಲು ಸನ್ನದ್ಧರಾದ ಯುವ ದಂಪತಿಗಳನ್ನು ಹಳ್ಳಿಯ ಜನರೆದುರಿಗೆ ನಿಲ್ಲಿಸಿ ಅವರ ಕುಟುಂಬದವರೇ ಕ್ರಿಮಿನಾಶಕದ ಗುಳಿಗೆಗಳನ್ನು ಒತ್ತಾಯವಾಗಿ ನುಂಗಿಸಿ, ಸತ್ತ ದೇಹವನ್ನು ಪೋಲೀಸರಿಗೆ ಯಾವುದೇ ಸುಳಿವು ಸಿಗದಂತೆ
ಪಂಚಭೂತಗಳಲ್ಲಿ ಲೀನವಾಗಿಸುವುದರಲ್ಲಿ ಈ ಜನರ ಅನುಭವ ಜನ್ಮ-ಜನ್ಮಾಂತರದ್ದು.

ಖಾಫ್ನ ಕಥೆ:
ಋಗ್ವೇದದ ಕಾಲ ಅಂದರೆ ಸುಮಾರು ಕ್ರಿ.ಪೂ.2500 ರಿಂದಲೂ ಬಳಕೆಯಲ್ಲಿರುವ ಪದ 'ಖಾಫ್'. ಬಹು ಚರ್ಚೆಗೆ ಗ್ರಾಹ್ಯವಾಗಿರೋ ಹಿಂದಿ ಪದ, 'ಪಾಲ್, ಜನಪದ, ಗಣಸಂಘ' ಅನ್ನೋ ಪಂಚಾಯ್ತಿಗಳಲ್ಲಿ ಇದು ಮೊದಲನೆಯದು. ಹದಿನಾಲ್ಕನೆಯ ಶತಮಾನದಿಂದೀಚೆಗೆ ಖಾಫ್ ಪಂಚಾಯ್ತಿ, ಸುಮಾರು 84 ಹಳ್ಳಿಗಳನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿತ್ತು. ಪ್ರಸ್ತುತ ಅದು 12 ರಿಂದ 24 ಹಳ್ಳಿಗಳ ಗುಂಪಾಗಿದೆ. ಹತ್ತರಿಂದ ಹದಿನೈದು ಹಿರಿತಲೆಗಳ ಪೀಠವೇ ಈ ಖಾಫ್ ಪಂಚಾಯ್ತಿ. ಪೋಲೀಸರಿಂದ ಅಥವಾ ನ್ಯಾಯಾಲಯದಿಂದ ನ್ಯಾಯದೊರಕಿಸಿಕೊಳ್ಳಲು ವರ್ಷಗಳ ಸತತ ಪ್ರಯತ್ನಬೇಕು, ಇದನ್ನು ತಪ್ಪಿಸುವ ದೃಷ್ಟಿಯಲ್ಲಿ ತಾವೇ ತೀಮರ್ಾನವನ್ನು ತೆಗೆದುಕೊಳ್ಳುತ್ತೇವೆ ಎಂದು ಬಣ್ಣಿಸಿಕೊಳ್ಳುವ ನರಹಂತಕರು, ಗೋತ್ರದ ಹೆಸರಿನಲ್ಲಿ, ಹಳ್ಳಿಯ ಪ್ರತಿಷ್ಠೆ, ವಂಶದ ಗೌರವ ಅನ್ನೋ ಕಳ್ಳ ನೆಪ ಒಡ್ಡಿ
ಮುಗ್ಧರ ಮಾರಣ ಹೋಮವನ್ನೇ ನಡೆಸುತ್ತಿದ್ದಾರೆ. ಇಲ್ಲಿ ಹೆಣ್ಣಿಗೆ ಯಾವುದೇ ಸ್ವಾತಂತ್ರ್ಯವಿಲ್ಲ, ಬೇಕಾಬಿಟ್ಟಿಯಾಗಿ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ತಪ್ಪನ್ನು ಮುಚ್ಚಿಹಾಕಲು ಖಾಫ್ ಪಂಚಾಯ್ತಿಯೆಂಬ ಹೀನ ಡೊಳ್ಳು ಸಭೆಗೆ ಬಲಿಪಶುವನ್ನಾಗಿಸುತ್ತಾರೆ. ಗಮನಿಸಬೇಕಾದ ಮುಖ್ಯ ಅಂಶವೆಂದರೆ ಈ ಪಂಚಾಯ್ತಿಗಳಲ್ಲಿ ಇದೂವರೆಗೂ ಹೆಣ್ಣಿನ ಸಮಸ್ಯೆಗಳ ವಿಚಾರವಾಗಿ ಯಾವತ್ತೂ ಪ್ರಸ್ತಾಪವಾಗದೆ ಇರೋದು. ಇದು ಕೊಲೆಗೇಡಿತನಕ್ಕೊಂದು ರಾಜಮಾರ್ಗದ ಸೃಷ್ಟಿಯಷ್ಟೇ.


ಅನಾಹುತ:
ಹೆಣ್ಣು ಗರ್ಭಗಳ ಹತ್ಯೆಯಿಂದಾಗಿ, ಹೆಣ್ಣು-ಗಂಡಿನ ಸರಾಸರಿ ಸಂಖ್ಯೆಯಲ್ಲಿ ಏರುಪೇರಾಗಿದೆ. ಕೆಲವೊಮ್ಮೆ ಗಂಡಸರಿಗೆ ಶಿಕ್ಷೆಯಲ್ಲಿ ಹಿಡಿತವಿದ್ದರೂ, ಹೆಂಗಸರಿಂದ ಊರಿನ ಮರ್ಯಾದೆಗೆ ಯಾವುದೇ ದಕ್ಕೆಯಾಗೋ ಹಾಗಿಲ್ಲ. ಸಣ್ಣವಯಸ್ಸಿನಿಂದಲೇ ಹುಡುಗ-ಹುಡುಗಿಯನ್ನು ಬೇರೆ ಬೇರೆಯಾಗಿ ಬೆಳೆಸುತ್ತಾ, ಶಾಲೆಗಳಿಗೂ ತಮ್ಮ ಪ್ರತ್ಯೇಕ ಸಮಯವನ್ನು ನಿಗದಿ ಮಾಡಿರುತ್ತಾರೆ. ಯೌವ್ವನದಲ್ಲಿ ಆಗುವಂತ ಪ್ರಕೃತಿ ಸಹಜ ಅಭಿವ್ಯಕ್ತತೆಯನ್ನು ಕ್ಷೀಣಿಸಲು ಪಣತೊಟ್ಟಿರುತ್ತಾರೆ, ಎಲ್ಲಿ ಪ್ರೀತಿಸಿ ಓಡಿ ಹೋಗುತ್ತಾರೋ ಎಂಬ ಭಯದಿಂದ ಬಾಲ್ಯವಿವಾಹವನ್ನು ಮಾಡಿರುತ್ತಾರೆ. ಅಕಸ್ಮಾತ್ ಹುಡುಗ ಹುಡುಗಿ ಯಾರೇ ಬಿಟ್ಟು ಹೋದರೆಂದರೂ ಅವರ ಕಥೆ ಮುಗಿದ ಹಾಗೆಯೇ. ಅದರೊಂದಿಗೆ ಅವರ ಮನೆಯವರೂ ಶಿಕ್ಷೆ ಅನುಭವಿಸಬೇಕು, ದಂಡ ಕಟ್ಟಬೇಕು ಅಥವಾ ಊರಿನಿಂದ ಹೊರಹೋಗಬೇಕು. ಈ ಕಾರಣದಿಂದಲೇ ಹೆತ್ತವರು ಕೂಡ ಕ್ರೂರಿಗಳಾಗಿ ವತರ್ಿ
ಸುತ್ತಾರೆ, ಹೊರಗಿನ ಒತ್ತಡ ತಮ್ಮ ಮಕ್ಕಳನ್ನೇ ಸರ್ವನಾಶಮಾಡುವ ಹಂತಕ್ಕೆ ಕೊಂಡೊಯ್ಯುತ್ತದೆ. ಕೆಲವೊಮ್ಮೆ ವಿಚಿತ್ರ ಹಿಂಸೆಕೊಟ್ಟು ಮಕ್ಕಳೇ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಾರೆ. ಇದಕ್ಕೆ ಸಾಕ್ಷಿಯಾಗಿ ನಿಂತವರು ಅದೆಷ್ಟೋ ಪ್ರೇಮ ಪಕ್ಷಿಗಳು.

ಆಹುತಿಯಾದವರು:
ಮಾರ್ಚ್ 2009ರಂದು ಹರಿಯಾಣದ ಜಿಂದ್ ಜಿಲ್ಲೆಯ ಒಂದು ಗ್ರಾಮದಲ್ಲಿ ಒಂದೇ ಗೋತ್ರದಲ್ಲಿ ಮದುವೆಯಾಗಿದ್ದಾರೆಂಬ ಒಂದೇ ಕಾರಣಕ್ಕೆ "ವೇದ್ ಪಾಲ್" ಎಂಬ ಯುವಕನಿಗೆ ಖಾಫ್ ಪಂಚಾಯ್ತಿಯಲ್ಲಿ ಮರಣದಂಡನೆಯನ್ನು ವಿಧಿಸುತ್ತಾರೆ. ಇದನ್ನು ಜೂನ್ ತಿಂಗಳಿನಲ್ಲಿ ಜಾರಿಗೆ ತರುತ್ತಾರೆ ಅದೂ, ಜನರ ಮಧ್ಯೆ ಮನಸ್ಸೋಯಿಚ್ಛೆ ಹೊಡೆದು ಉರುಳಿಸೋ ಮೂಲಕ. ಇದೇ ಕಾರಣಕ್ಕೆ ಕುರುಕ್ಷೇತ್ರ ಪ್ರದೇಶದಲ್ಲಿ 2007
ನೇ ಇಸವಿಯಲ್ಲಿ ಮನೋಜ್(23) ಹಾಗೂ ಬಬಲೀ(19) ಯುವಜೋಡಿಯನ್ನು ವಿಷಕೊಟ್ಟು ಹೆತ್ತವರೇ ಮುಗಿಸಿಬಿಟ್ಟಿದ್ದರು. ಖಾಫ್ನ ಮುಖಂಡರ ಪ್ರಕಾರ ಈ ಪ್ರೇಮಿಗಳಿಗೆ ಅಣ್ಣ-ತಂಗಿಯ ಸಂಬಂಧವಂತೆ...! ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ನಮಗೆ ತಿಳಿಯುತ್ತದೆ, ತಮ್ಮ ಆಸ್ತಿಯನ್ನು ವೃದ್ಧಿಗೊಳಿಸಿಕೊಳ್ಳುವ ಹಾಗೂ ಉಳಿಸಿಕೊಳ್ಳುವ ತಂತ್ರಗಾರಿಕೆ ಇದರಲ್ಲಿ ಅಡಕವಾಗಿದೆ [ಪ್ರಮುಖರು ಹರಿಯಾಣದ ಜಾತರು].
ಮಾಧ್ಯಮಗಳಲ್ಲಿ ಚರ್ಚೆಗೆ ಎಡೆ ಮಾಡಿದ್ದ ಮತ್ತೊಂದು ಪ್ರಕರಣ ಜಾರ್ಖಂಡ್ ಮೂಲದ ದೆಹಲಿಯ ಜರ್ನಲಿಸ್ಟ್ ನಿರೂಪಮಾ ಪತಕ್(23), ತನ್ನ ಊರಿನ ಮನೆಯಲ್ಲಿ ಏಪ್ರಿಲ್ 29ರಂದು ತನ್ನ ಕುಟುಂಬದವರಿಂದಲೇ ಉಸಿರುಗಟ್ಟಿ ಕೊಲೆಯಾಗಿದ್ದಳು. ಪ್ರಿಯಭಾ
ನಶೂ ರಂಜನ್, ನಿರೂಪಮಾಳ ಗೆಳೆಯ ಈತನೂ ಒಬ್ಬ ಜರ್ನಲಿಸ್ಟ್. ಇವರಿಬ್ಬರ ಮದುವೆಗೆ ನಿರೂಪಮಾ ಮನೆಯವರಿಂದ ಆಕ್ಷೇಪವಿತ್ತು, ಕಾರಣವಿಷ್ಟೇ ಹುಡುಗ ಕೆಳಜಾತಿಯವನೆಂಬುದು. ಇದಕ್ಕೆ ವಿರೋಧವನ್ನೊಡ್ಡಿದ್ದಕ್ಕೆ ಕುಟುಂಬದ ಮರ್ಯಾದ ಉಳಿಸಬೇಕೆಂಬ ದುರಾಲೋಚನೆಯಿಂದ ಮುಗ್ಧ ಮಗಳ ಜೀವಕಳೆದಿದ್ದಾರೆ. ಈಕೆ ಸತ್ತಾಗ ಎರಡೂವರೆ ತಿಂಗಳ ಪುಟ್ಟ ಜೀವ ಹೊಟ್ಟೆಯಲ್ಲಿ ಮೊಳಕೆಯೊಡೆದಿತ್ತು. ಹೀಗೆ ಕುಲ-ಕುಲವೆಂದು ಅದೆಷ್ಟು ಕೊಲೆಗಳಾಗಿವೆಯೋ...?
ಈ ಶತಮಾನದಲ್ಲೂ ಇಂತಹ ಘಟನೆಗಳು ನಮ್ಮ ಸಮಾಜದಲ್ಲಿ ನಡೆಯುತ್ತಿವೆಯಾ ಎಂದು ಆಶ್ಚರ್ಯವಾದರೂ, ಇವು ಕಠೋರ ಸತ್ಯಗಳೇ. ವಿಕೃತ ಮೇಲ್ವರ್ಗದ ಮನಸುಗಳ ಕರಾಳ ಆಚರಣೆಗೆ ಹಿಂದುಳಿದ ಬಡ ಕುಟುಂಬವೊಂದು ಮಿರ್ಚ್ ಪುರ ಗ್ರಾಮದಲ್ಲಿ ಬಲಿಯಾಗಿದೆ. ಖಾಫ್ ಪಂಚಾಯ್ತಿಯ ವಿರುದ್ಧದ ಒಂದೇ ಒಂದು ಮಾತಿಗೆ ಪೋಲೀಸರ ಎದುರಿಗೇ 20 ಮನೆಗಳಿಗೆ ಬೆಂಕಿ ಇಡಲಾಯಿತು, ಇದರಲ್ಲಿ 18 ವರ್ಷದ ಅಂಗವಿಕಲ ಹೆಣ್ಣುಮಗಳು ಹಾಗೂ ವಯಸ್ಸಾದ ಆತನ ತಂದೆ ಸುಟ್ಟು ಕರಕಲಾದರು.
ಒಟ್ಟಿನಲ್ಲಿ ಖಾಫ್ ಪಂಚಾಯ್ತಿ, ಮೇಲ್ಜಾತಿಯ ಹುಡುಗಿ, ಕೆಳಜಾತಿಯ ಹುಡುಗ, ಒಂದೇ ಗೋತ್ರದವರು, ಒಂದೇ ಊರಿನವರು ಮದುವೆಯಾಗೋದನ್ನ ಒಪ್ಪೋದಿಲ್ಲವಂತೆ. ಹಾಗಾದರೆ ಅಂತಾರಾಷ್ಟ್ರೀಯ ವಿವಾಹವೇ ಇದಕ್ಕೆ ಪರಿಹಾರದಂತೆ ತೋರುತ್ತದೆ.

*ಛೆ! ಇದೆಂಥಾ ಸಂಸ್ಕೃತಿ...?
"ಪ್ರೀತಿ ಮಧುರ, ತ್ಯಾಗ ಅಮರ" ಇದನ್ನು ಅಕ್ಷರಶಃ ನಿಜಮಾಡುವ ನಿಟ್ಟಿನಲ್ಲಿ ತರಗೆಲೆಗಳಂತೆ ಯುವ ಜೋಡಿಯ ತಲೆ ಉರುಳುತ್ತಿವೆ. ಇಂಥ ಕುರುಡು ಘೋರ ಪದ್ಧತಿಯನ್ನು ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧಿಸುವವರೇ ಇಲ್ಲವಾ? ನಮ್ಮ ಸೆಕ್ಯುಲರರ್ ಕಾನೂನಿನ ಚೌಕಟ್ಟಿನ ಒಳಗೆ ಈ ವಿಷಯಗಳು ಪ್ರಸ್ತುತವೇ ಅಲ್ಲವಾ?. ಎಲ್ಲಾ ಇದ್ದು ನ್ಯಾಯದ ಕಣ್ಣಿಗೆ "ಕೂಲಿಂಗ್ ಗ್ಲಾಸ್" ಹಾಕಿ ಕೂರಿಸಿರುವವರು, ಎಲ್ಲಿಯೂ ಸಲ್ಲದೆ ರಾಜಕಾರಣಕ್ಕೆ ಬಂದ ಮತಾಂಧ ರಾಜಕಾರಣಿಗಳು. ಖಾಫ್ ಪಂಚಾಯ್ತಿ ಅನ್ನೋದು ಇವರ ಪಾಲಿನ ದೊಡ್ಡ ವೋಟ್ ಬ್ಯಾಂಕ್. ಇದೊಂದು ರೀತಿಯ ಭದ್ರಕೋಟೆಯಿದ್ದಂತೆ, ಅವರನ್ನು ಸಂಭಾಳಿಸುವ ನಿಟ್ಟಿನಲ್ಲಿ ಎಂ.ಎಲ್.ಎ, ಎಂ.ಪಿ ಗಳು ಪೋಲಿಸರನ್ನು ಕೂಡಿಕೊಂಡು ಬಾಂಧವ್ಯದ ಬೆಸುಗೆ ಬೆಸೆದಿದ್ದಾರೆ. ಇವರಿಂದ ದೇಶದ ಉನ್ನತಿಯ ಯೋಚನೆ ಮಾಡುವುದಾದರೂ ಹೇಗೆ...? ಅಷ್ಟು ಸಾಲದೆಂಬುದಂತೆ ತಮ್ಮ ಕುತಂತ್ರ ಬುದ್ಧಿಯಿಂದ ಸೆಕ್ಷನ್ 5ರ ಹಿಂದೂ ವಿವಾಹ ಕಾಯ್ದೆ, 1955ಕ್ಕೆ ತಿದ್ದುಪಡಿ ತಂದು ಖಾಫ್ ಪಂಚಾಯಿತಿಯಲ್ಲಿರುವಂತೆ ಸ್ವಗೋತ್ರದ ಮದುವೆಯನ್ನು ನಿಷೇಧಿಸಬೇಕೆಂದು ಹೋರಾಟವನ್ನು ನಡೆಸುವಂತೆ ಜನರನ್ನು ಪ್ರೇರೇಪಿಸಿದ್ದಾರೆ. ಕಾನೂನಿನ ಪ್ರಕಾರ ಇವರಿಗೆ ಯಾವುದೇ ಅಧಿಕಾರವಿಲ್ಲದಿದ್ದರೂ, ಅವರ ಸಮುದಾಯದಲ್ಲಿ ಅವರದೇ ಪ್ರಭಾವ ಹೆಚ್ಚು.
ಕಸಬ್ನಂತಹ ಭಯೋತ್ಪಾದಕನನ್ನು ಕೊಲ್ಲಲು ಇಷ್ಟು ದಿವಸಗಳು ಸವೆಸುತ್ತಿರುವ ನಮ್ಮ ನ್ಯಾಯ ವ್ಯವಸ್ಥೆ, ಅಫ್ಜಲ್ ಗುರುವನ್ನು ನೇಣು ಹಾಕಲು ಸಿಬ್ಬಂದಿಯೇ ಇಲ್ಲವೆಂದು ಹೇಳುತ್ತಿರುವುದು ಈ ಮರ್ಯಾದ ಹತ್ಯೆಯ ಮುಂದೆ ನಗೆಪಾಟಲಿಗೆ ಗುರಿಯಾಗಿದೆ. ಎಷ್ಟೋ ಮುಗ್ಧ ಮನಸ್ಸುಗಳು ದಿನನಿತ್ಯ ಕ್ರೌರ್ಯದ ಕತ್ತರಿಯ ಮಧ್ಯೆ ಸಿಲುಕಿ ಒದ್ದಾಡುತ್ತಿದ್ದರೂ ಅವರನ್ನು ರಕ್ಷಿಸಲಾಗದ ಕಾನೂನು ಎಷ್ಟು ಸಮರ್ಥವೆಂಬ ಸಂಶಯ ಸುಳಿದಾಡುತ್ತದೆ. ಶತಮಾನಗಳಿಂದ ಸಹಿಸುತ್ತಾ ಬಂದಿರುವ ಜನತೆ ಇನ್ನಾದರೂ ಎಚ್ಚರಗೊಳ್ಳಬೇಕು ಮೌಢ್ಯತೆಯ ಚೌಕಟ್ಟನ್ನು ದಾಟಿ ಹೊರಬರಬೇಕು. ಮುಖ್ಯವಾಗಿ ಯುವಜನತೆಯ ಉಳಿವು ದೇಶದ ಬೆಳವಣಿಗೆಗೆ ಅವಶ್ಯಕ, ತಮ್ಮ ಬಾಲ್ಯದಿಂದ ಕಟ್ಟು ಪಾಡುಗಳಿಗೆ ಜೋತುಬಿದ್ದು, ತಮ್ಮ ಸುತ್ತಲಿನ ಸಮಾಜಕ್ಕೆ ಹೆದರಿ, ಒತ್ತಡಕ್ಕೆ ಮಣಿದು ವಂಶದ ಕುಡಿಗಳನ್ನೇ ನಾಶಮಾಡಲು ಹೊರಟಿರುವವರ ಮನಸ್ಸು, ಬುದ್ಧಿ ಹತೋಟಿಯಲ್ಲಿಲ್ಲ ಎಂಬುದು ಸತ್ಯ. ಇದರ ಬಗೆಗೆ ದೇಶದ ಜನ ಪೂರಕವಾಗಿ ಯೋಚಿಸಬೇಕು, ಆ ಜನರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಯಬೇಕು ಹಾಗೇ ತಮ್ಮ ಸ್ವಾರ್ಥಕ್ಕೆ ಬೂಟಾಟಿಕೆಯ ಪಂಚಾಯ್ತಿ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.
ಕೆಲವು ದಿನಗಳ ಹಿಂದೆಯಷ್ಟೇ ಸುಪ್ರೀಂ ಕೋರ್ಟ್, ಹರಿಯಾಣ ಸೇರಿದಂತೆ ಏಳು ಜಿಲ್ಲೆಗಳಿಗೆ ನೋಟೀಸ್ ಜಾರಿಮಾಡಿದೆ. ಹಾಗೂ ಕೇಂದ್ರ ಕಾನೂನು ಸಚಿವರಾದ ಎಂ.ವೀರಪ್ಪ ಮೊಯಿಲಿ ಮರ್ಯಾದ ಹತ್ಯೆಯ ವಿರುದ್ಧ ಹೊಸ ಕಾನೂನು ಸಮರವನ್ನು ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದರೂ, ಈ ಬಗ್ಗೆ ಜುಲೈ 22ರಿಂದ ಪ್ರಾರಂಭವಾಗುವ ಅಧಿವೇಶನದ ಕಲಾಪದಲ್ಲಿ ಚರ್ಚೆ ನಡೆಯಬೇಕು. ರಾಜಧಾನಿ ದೆಹಲಿಯೂ ಈ ಘಟನೆಗಳಿಂದ ಹೊರತಾಗಿಲ್ಲವೆಂದರೆ, ಇನ್ನು ಹಳ್ಳಿಗಳ ಗತೀ.....?


Tuesday, June 22, 2010



ಭ್ರಷ್ಟರಿಂದ ಬತ್ತಿಹೋದ ಮಹಾನಗರ ಪಾಲಿಕೆ(B B M P)

ಬಿ.ಬಿ.ಎಂ.ಪಿಯ ಭ್ರಷ್ಟಾಚಾರಗಳು ಬ
ಯಲಾಗ ತೊಡಗಿವೆ. 'ಅಕ್ರಮವೇ ನಮ್ಮ ಹಕ್ಕು, ಕಳಪೆಯೇ ನಮ್ಮ ಕೆಲಸ, ಹಣವೊಂದೇ ನಮ್ಮ ಗುರಿ' ಎಂಬ ತತ್ವವನ್ನು ಹಿಡಿದು ಹಣದ ಹೊಳೆಯಲ್ಲಿ ತೇಲಾಡುತ್ತಿದ್ದ ಕಂಟ್ರಾಕ್ಟರ್ಗಳಿಗೆ ಬಾರೀ ಹೊಡೆತವೇ ಬಿದ್ದಿದೆ. ಕಾಂಪೌಂಡ್ ಗೋಡೆಯ ಉರುಳುವಿಕೆಯ
ನಂತರ ಬಹಿರಂಗವಾದ ಮುನಿರತ್ನರ ಹಗರಣ, ಬಿ.ಬಿ.ಎಂ.ಪಿಯಲ್ಲಿನ ಕೆಲಸಗಳಿಗೆ ಒಂದು ಸಣ್ಣ ನಿದರ್ಶನದಂತೆ ಅಷ್ಟೇ. ಇಂತಹ ಅದೆಷ್ಟೋ ಕಂಟ್ರಾಕ್ಟರುಗಳು ಅಭಿವೃದ್ಧಿಯ, ಕಾಮಗಾರಿಯ ಹಣವನ್ನು ಗುಳುಂ ಮಾಡಿ ರಾತ್ರೋರಾತ್ರಿ ಆಗರ್ಭ ಶ್ರೀಮಂತರಂತೆ ಎದ್ದು ನಿಂತಿದ್ದಾರೆ. ಸಾಮಾನ್ಯ ರಸ್ತೆ ಕಂಟ್ರಾಕ್ಟರ್ ಒಬ್ಬ ಬೆಂಗಳೂರಿನಂತಹ ಮಹಾನಗರದಲ್ಲಿ ಪಾಲಿಕೆಯ ಕಾಪರ್ೊರೇಟ್ ಆಗಿ ಆಯ್ಕೆಯಾಗುವುದು ಅಷ್ಟು ಸುಲಭದ ಮಾತಲ್ಲ, ಅಂದರೆ ಆತನು ಆಥರ್ಿಕವಾಗಿ ಕೆಲವೇ ವರ್ಷಗಳಲ್ಲಿ ಅದೆಷ್ಟು ದಷ್ಟಪುಷ್ಟವಾಗಿ
ಬೆಳೆದಿದ್ದಾರೆಂಬುದಕ್ಕೆ ಸಾಕ್ಷಿ.

ಇತ್ತೀಚಿಗಷ್ಟೆ ನಡೆದ ಬಿ.ಬಿ.ಎಂ.ಪಿ ಚುನಾವಣೆಯಿಂದ ಜನಪ್ರತಿನಿದಿಗಳು ಆಯ್ಕೆಯಾಗಿ ಬಂದಿದ್ದಾರೆ. ಆದರೆ, ಎಷ್ಟೋ
ತಿಂಗಳಿಂದ ವರ್ಷಗಳಿಂದ ಸರ್ಕಾರವು ಚುನಾವಣೆನಡೆಸದೆ ತಮ್ಮ ಸ್ಥಾನಗಳನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಅನೇಕ ಆಪರೇಷನ್ಗಳನ್ನು ನಡೆಸಿ ಆಡಳಿತಪಕ್ಷವೇ ಅಧಿಕಾರಕ್ಕೆ ಬರುವಂತಾಗಿದೆ. ಅಷ್ಟರವರೆಗೂ ಅಧಿಕಾರಿಗಳ ಕೈಯಲ್ಲೇ ಅಧಿಕಾರವಿದ್ದುದ್ದರ ಫಲವೇ ಈಗ ಕಳಪೇ
ಕಾಮಗಾರಿ ಎಂಬ ಹೆಸರಿನಲ್ಲಿ ಹೊರಬೀಳುತ್ತಿದೆ.

ಈ ವ್ಯವಸ್ಥೆಯನ್ನು ನೋಡಿ-ನೋಡಿ ಬೇಸತ್ತ ನಮಗೆ ಅನೇಕ ಸಂಶಯಗಳು, ಪ್ರಶ್ನೆಗಳು ಕಾಡತೊಡಗುತ್ತವೆ.
@ ಕಂಟ್ರಾಕ್ಟರ್ಗಳು ತಮ್ಮದೇ ಅಂದಾಜಿನ ಮೊತ್ತವನ್ನು ಸೃಷ್ಟಿಸುತ್ತಾ, ಅನುಮತಿಯನ್ನು ಎಷ್ಟು ಸರಳವಾಗಿ ಪಡೆಯುತ್ತಾರೆ. ಇಲ್ಲಿ ಕಂಟ್ರಾಕ್ಟರ್ಗಳ ನಡುವಣ ಸ್ಪರ್ಧೆಯೇ ಇಲ್ಲವಾ? ಅಥ
ವಾ ಇವರೆಲ್ಲಾ ಪ್ರೀಪ್ಲಾನ್ಡಾಗಿ ಸಂಪಾದನೆಗೆ ಸರಳ ಸೂತ್ರಗಳನ್ನು ಕಂಡುಕೊಂಡಿದ್ದಾರಾ?
@ ಈ ಎಲ್ಲಾ ವಿಷಯಗಲು ಅಧಿಕಾರಿಗಳ, ಎಂಜಿನಿಯರ್ಗಳ ಗಮನಕ್ಕೆ ಬರೋದೇ ಇಲ್ವಾ? ಬಂದರೂ ಸಮ್ಮನಿದ್ದರೆ, ಕಂಟ್ರಾಕ್ಟರ್ಗಳ
ಮಾಫಿಯಾದಲ್ಲಿ ಇವರ ಪಾಲೂ ಬಹುದೊಡ್ಡದಿರಬಹುದಾ?
@ ಕೇವಲ ಅಮಾನತಿನ ಕ್ರಮತೆಗೆದುಕೊಳ್ಳುವ ಅಧಿಕಾರವಷ್ಟೇ ಆಯುಕ್ತರಿಗೆ, ಮೇಯರ್ಗೆ ಇರೋದಾದರೆ, ಕಳಪೆ ಕಾಮಗಾರಿ,
ಭ್ರಷ್ಟತೆ ಸಾಬೀತಾದರೂ ಕೆಲಸದಿಂದ ಕಿತ್ತು ಹಾಕಲು ಆಗೋದೇ ಇಲ್ವಾ?
@ಕೇವಲ 'ಸ್ವಚ್ಛತೆಯ ಹಾಗೂ ರಸ್ತೆ ಅಗಲೀಕರಣದ' ಕೆಲಸವನ್ನು ಮಾತ್ರ ನಿರ್ವಹಿಸುವ ಬಿ.ಬಿ.ಎಂ.ಪಿಯಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ದಂಧೆ ನಡೆಯುತ್ತಿದೆಯೆಂದರೆ, ಉಳಿದ ಮಂಡಳಿಗಳ, ವಿಭಾಗಗಳ ಗತಿಯೇನು?
@ ದುಡ್ಡು ಓ.ಕೆ, ಕೆಲಸ ಯಾಕೆ? ಅನ್ನೋ ಈ ವ್ಯವಸ್ಥೆಯಲ್ಲಿ ಅಭಿ
ವೃಧ್ಧಿ ಅನ್ನೋ ಪದಕ್ಕೇನಾದರೂ ಅರ್ಥವಿದೆಯಾ?
@ ಯವುದೇ ಕಾಮಗಾರಿಗೂ ಪೂರ್ವ ನಿಮರ್ಿತ ಆಕೃತಿಯಾಗಲಿ, ನಕ್ಷೆಯಾಗಲಿ ಇಲ್ಲದೆ ಕೆಲಸ ನಿರ್ವಹಿಸಲು ಇದೇನು ಮಕ್ಕಳಾಟವಾ ಅಥವಾ ಇವರೇನು ದೇವಶಿಲ್ಪಿಗಳಾ?

ಹಾಗಾದರೆ ಇದರಿಂದಾಗೋ ನಷ್ಟಕ್ಕೆ ಹೊಣೆಯಾರು, ದೂಷಿಸುವುದಾದರೂ ಯಾರನ್ನ? ಇಂತಹ ಹಾದು ಹೋಗೋ
ಕಿಚ್ಚಿನ ಕಿಡಿಗಳ ಹಿನ್ನೆಲೆಯನ್ನಿಟ್ಟುಕೊಂಡು ದುರ್ಘಟನೆಯ ಸುತ್ತಾ ಜಾಲಾಡಿ ಬರೋಣ...
ಸಂಜೆ ಸುಮಾರು 6:30ರ ಸಮಯ, ಮೋಡ ಕರಗಿ ಮಳೆಯು ಹನಿಹನಿಯಾಗಿ ಒಮ್ಮೆಗೆ ಸುರಿಯುತ್ತಾ, ಒಮ್ಮೆಗೆ ಬಿರುಸಾಗ ತೊಡಗುತ್ತದೆ. ಗುಡುಗಿನ ಶಬ್ದಕ್ಕೆ, ಮಳೆಯ ಚಳಿಗೆ ನಡುಗಿ ಹದಿನಾಲ್ಕು ಅಡಿ ಎತ್ತರದ ಕಲ್ಲಿನ ಉದ್ದನೆಯ ಗೋಡೆ ಧೊಪ್ಪೆಂದು ಕುಸಿಯುತ್ತದೆ, ಅದರ ಕೆಳಗೆ ಮುಗ್ಧ ಹೆಣ್ಣು ಮಗಳೊಬ್ಬಳಿದ್ದಾಳೆ..... ಅಬ್ಬಾ! ಒಂದು ಕ್ಷಣ ಎದೆ ಝಲ್ಲೆನಿಸುತ್ತದಲ್ಲವೆ? ಆದರೂ ಇದು ನಗ್ನ ಸತ್ಯ. ಜೂನ್ 1 ಮಂಗಳವಾರ ಸಂಜೆ ಇಂಥದ್ದೇ ದುರ್ಘಟನೆಯಲ್ಲಿ ಸಿಲುಕಿದ 'ಸಂಜನಾ ಸಿಂಗ್' ಸಾವಿಗೆ ಶರಣಾಗಿದ್ದಾಳೆ.

*ಸಾವಿನ ಆ ಸಂಜೆ:
'ಕೇಂದ್ರೀಯ ವಿದ್ಯಾಲಯ'ದಲ್ಲಿ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದ ಸಂಜನಾ ಸಿಂಗ್ ಸಂಜೆ 6:30ರ ವೇಳೆಗೆ ಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದಾಗ ದಿಢೀರನೆ ಆರಂಭವಾದ ಮಳೆಯಿಂದ ತಪ್ಪಿಸಿಕೊಳ್ಳಲು ಬಳ್ಳಾರಿ ರಸ್ತೆಯ ಹೆಬ್ಬಾಳ ಫ್ಲೈ ಓವರ್ ಬಳಿಯಿರುವ 'ಪಶು ವೈದಕೀಯ ಕಲೇಜಿನ' ಎತ್ತರದ ಕಾಂಪೌಂಡ್ ಗೋಡೆಯ ಬಳಿ ಆಶ್ರಯ ತೆಗೆದುಕೊಳ್ಳಲು ನಿಂತಿದ್ದ ಸಮಯದಲ್ಲಿ ಮೃತ್ಯುವಿನಂತೆ ಮೇಲೆರಗಿದ 14 ಅಡಿ ಎತ್ತರದ ಗೋಡೆ ಸಂಜನಾಳನ್ನು ಅರೆಜೀವವನ್ನಾಗಿಸಿತು. ಈ ಅಫಘಾತದಿಂದ ಪಾರಾಗಲು ಪ್ರಯತ್ನಿಸಿದಳಾದರೂ ಅದು ಫಲನೀಡಲಿಲ್ಲ, ಪೋಲೀಸಿನವರು ಹಾಗು ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕೆ ಬಂದು ತುರ್ತು ಕಾರ್ಯಾಚರಣೆ ನಡೆಸಿ ಆಸ್ಪತ್ರೆಗೆ ಕರೆದೊಯ್ದರೂ ಅದು ಪ್ರಯೋಜನವಾಗಲಿಲ್ಲ. ಆ ಕೊನೆಯ ಕ್ಷಣದಲ್ಲೂ ಹುಡುಗಿ ತನ್ನ ತಾಯಿಯೊಂದಿಗೆ ಮಾತನಾಡಬೇಕೆಂದು ಹಂಬಲಿಸುತ್ತಾ ಮೊಬೈಲಿನಲ್ಲಿ ಪ್ರಯತ್ನಿಸುತ್ತಿದ್ದಳೆಂಬುದು ಮನಸ್ಸನ್ನು ಕಲಕುತ್ತದೆ. ಗಂಗಾ
ನಗರದ ಲಕ್ಷ್ಮಮ್ಮ ಕಾಲೋನಿಯ ಸಿವಾಸಿಗಳಾದ ಅಶೋಕ್ ಕುಮಾರ್ ಸಿಂಗ್ ಮತ್ತು ಆರತಿಯವರ ಜೇಷ್ಠ ಪುತ್ರಿ ಈ ಸಂಜನಾ ಸಿಂಗ್.

*ಕಾಂಪೌಂಡ್ ಕಾಂಟ್ರಾಕ್ಟರ್ಸ:
ನಮ್ಮ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆೆಯಲ್ಲಿ ಯಾವುದೇ ಯೋಜನೆಗಳಾದರೂ, ಬಿಳ್ಡಿಂಗ್ ಬಿಟ್ಟು ಹೊರಬರುವಷ್ಟರಲ್ಲಿ, ಕಾಸಿನಿಂದ ಹಿಡಿದು ಕೆಲಸದವರೆಗೂ ಶೇ.50-60% ಭಾಗ ಫಿಲ್ಟರ್ ಆಗಿ ಉಳಿಯೋ 40%ಬಾಗ ಮಾತ್ರ ಅನುಷ್ಟಾನವಾಗೋ ಭರವಸೆಗಳಿರುತ್ತವೆ. ಇದರ ನಡುವೆ, ಕಾಂಟ್ರಾಕ್ಟರ್ಗಳ ಕಲಪೆ ಕಾಮಗಾರಿಯೂ ಸೇರಿ ಬೆಂಗಳೂರು ಬೋಳಾಗತೊಡಗಿದೆ. ಚಲನಚಿತ್ರ ನಿಮರ್ಾಪಕರು ಹಾಗು ಪ್ರಸ್ತುತ ಯಶವಂತಪುರ ವಾರ್ಡನ್ ಕಾರ್ಪೊರೇಟರ್ ಆಗಿರುವ ಮುನಿರತ್ನಂ ನಾಯ್ಡು ಈ ಹಿಂದೆ, 2008ರಲ್ಲಿ ಪಶುವೈದಯಕೀಯ ಕಾಲೇಜಿನ ಪಶ್ಚಮ ಭಾಗದ ಸವರ್ಿಸ್ ರಸ್ತೆಯನ್ನು 30 ಮೀಟರ್ನಿಂದ 45 ಮೀಟರ್ಗೆ ವಿಸ್ತರಿಸುವ ಕೆಲಸ ಮತ್ತು ರಸ್ತೆಯ ಕಾಂಪೌಂಡ್ ಗೋಡೆಯ ಪಾಯ ನಿರ್ಮಾಣದ ಕಾಮಗಾರಿಯನ್ನು ಮಾಡಲು ಹಾ
ಗೂ ಎಂಜಿನಿಯರಿಂಗ್ ಮುಗಿಸಿ ಬಂದು ಮೊದಲ ಯೋಜನೆಯಾಗಿ ಕಾಂಪೌಂಡ್ ಗೋಡೆ ನಿರ್ಮಾಣದ ಕಾಮಗಾರಿಯ ಗುತ್ತಿಗೆಯನ್ನು ಪಡೆದವರು ಬಿ.ಹ್ಯೂಮೇಶ್ ಕುಮಾರ್. ಈ ಕಾಮಗಾರಿಯ ಅಂದಾಜು ಪಟ್ಟಿ ಮೊತ್ತ ರೂ 19.72 ಕೋಟಿಗಳು, ಗುತ್ತಿಗೆದಾರ ಮುನಿರತ್ನ ಈ ಪಟ್ಟಿಗೆ ಶೇ. 18 ರಷ್ಟು ಹೆಚ್ಚುವರಿ ಟೆಂಡರ್ ದರ ಸೇರಿಸಿ ಒಟ್ಟಾರೆ 17 ಕೋಟಿಗಳಾಗಿದ್ದು, ಆನಂತರ ಈ ಮೊತ್ತವು ಮತ್ತೆ ಪರಿಷ್ಕರಣೆಗೊಂಡು 29.55 ಕೋಟಿ ರೂಪಾಯಿಗೆ ಏರುತ್ತದೆ. ಇದರಲ್ಲಿ ಹ್ಯೂಮೇಶರ ಗೋಡೆ ಕಾಮಗಾರಿಗೆ 8.62 ಲಕ್ಷ ರೂಗಳ ಅಂದಾಜು 3ನೇ ಜುಲೈ 2009 ರಂದು ರೂಪುಗೊಂಡಿತ್ತು. ಇಷ್ಟೆಲ್ಲ ಖರ್ಚು ವೆಚ್ಚಗಳ ಹೊಳೆಯೇ ಹರಿದರೂ ಕಳಪೆ ಕಾಮಗಾರಿಯೆಂಬ ಕಳ್ಳಾಟ ಮುಗ್ಧ ಜೀವಿಗಳ ಬಲಿಗೆ ಕಾರಣವಾಗುತ್ತಿದೆ. ಇದರಿಂದ ಸ್ಪಷ್ಟವಾಗುವುದು ಅಧಿಕಾರಿಗಳು ಲಂಚದ ಹಣಕ್ಕೆ ನಕಲಿ ಬಿಲ್ ಸೃಷ್ಟಿಸುವುದು, ಕಳಪೆ ಕಾಮಗಾರಿಗೂ ಸರ್ಟಿಫಿಕೆಟ್ ಕೊಡುವುದು ನಿತ್ಯಕಾಯಕವಾಗಿದೆ ಎಂಬುದು. ಗೋಡೆ ಬಿದ್ದ ಹಗರಣದ ಹಿನ್ನೆಲೆಯಲ್ಲಿ ಕ್ರ್ರಿಮಿನಲ್ ಕೇಸನ್ನು ಅಧಿಕಾರಿಗಳಂದ ಹಿಡಿದು ಕಾಂಟ್ರಾಕ್ಟರ್ವರೆಗೂ ಪೋಲೀಸರು ಹೂಡಿದ್ದರೂ ಎಲ್ಲರೂ 'ಬೇಲ್' ಎಂಬ ಬಿಲದ ಮೂಲಕ ಹೊರಬಂದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಅನೇಕ ಅಧಿಕಾರಿಗಳನ್ನು ಆಯುಕ್ತರಾದ ಭಗತ್ಲಾಲ್ ಮೀನ ರವರು ಈಗಾಗಲೇ ಅಮಾನತ್ತಿನಲ್ಲಿ ಇಟ್ಟಿದ್ದಾರೆ.
ಅಂದಾಜು ಪಟ್ಟಿಯನ್ನು ತಯಾರಿಸಿದ ಅಧಿಕಾರಿಗಳು:
ವಿಶ್ವನಾಥ್, ಕಾರ್ಯಪಾಲಕ ಅಭಿಯಂತರರು
ರಮಾಕಾಂತ್ ದೇಸಾಯಿ, ಸಹಾಯಕ ಕಾರ್ಯಪಾಲಕ ಅಭಿಯಂತರರು
ಚಂದ್ರಶೇಖರ್, ಕರ್ಯಪಾಲಕ ಅಭಿಯಂತರರು

ಕಾಮಗಾರಿ ನಿರ್ವಹಣೆಯ ಮೇಲುಸ್ರುವಾರಿ ಮತ್ತು ಬಿಲ್ ತಯರಿಸುವ ಕರ್ತವ್ಯವನ್ನು ನಿರ್ವಹಿಸಿದವರು:
ಚಿದಾನಂದಯ್ಯ ಹಾಗು ಪದ್ಮನಾಭ ಕಾರ್ಯಪಾಲಕ ಅಭಿಯಂತರದವರು
ಅಶ್ವಥ್ ನಾರಾಯಣ ರೆಡ್ಡಿ, ಸ.ಕಾ.ಅ
ಸತೀಶ್, ಸಹಾಯಕ ಅಭಿಯಂತರರು

ಕುಲಗೆಟ್ಟ ಕಳಪೆ ಕಮಗಾರಿಗೆ ಸಹಾಯ ಹಸ್ತವನ್ನು ನೀಡಿರುವ ಅಧಿಕರಿಗಳ ತಲೆಯ ಮೇಲೆ ಈಗ ಕತ್ತಿ ತೂಗುತ್ತಾಯಿದೆ. ಇಂತಹ ಕೊಳ್ಳೆ ಹೊಡೆಯೋ ಕಾಂಟ್ರಾಕ್ಟರ್ಗಳ ಕೈ ಹಿಡಿದು ನಡೆಸುತ್ತಿರುವ ಬಿ.ಬಿ.ಎಂ.ಪಿ. ಮಹಾನಗರದ ಮಾರಣಹೋಮಕ್ಕೆ ಸೈನ್ಯ ಸಿದ್ಧ ಮಾಡುತ್ತಿರುವಂತಿದೆ. ಹಣದ ಅರಾಧಕರಂತೆ, ಭ್ರಷ್ಟಾಚಾರದ ಭೂತಗಳಂತೆ ಕಂಗೊಳಿಸುವ ಅಧಿಕಾರಿಗಳು ಬದಲಾಗೋ ವರೆಗೂ ಇಂತಹ ಎಷ್ಟೋ ಮಹಾಗೋಡೆಗಳ ಅವ್ಯವಹಾರಗಳು, ಕಳಪೆ ಕಾಮಗಾರಿಗಳು ಬೆಳಕಿಗೆ ಬಾರದೆ ಮುನ್ನಡೆಯುತ್ತಲೇ ಇರುತ್ತವೆ.

*ಇಂತದ್ದೇಷ್ಟೋ...?
ಸಂಜನಾಳನ್ನು ಬಲಿತೆಗೆದುಕೊಂಡ ಗೋಡೆಗೆ ಸುಮಾರು 10ಅಡಿ ದೂರದಲ್ಲಿರುವ ಅಂಡರ್ ಪಾಸ್ ಮೇಲೆ ದಂಪತಿಗಳು ಬೈಕಿನ ಮೂಲಕ ಹಾದು ಹೋಗುತ್ತಿರುವಾಗ ಗಂಡಿ ಬಿದ್ದಿರುವುದು ಕಾಣದೇ ಬೈಕಿನ ಗಾಲಿ ಗುಂಡಿಗೆ ಇಳಿದು ಲಕ್ಷ್ಮಿ(31)ಯ ಸಾವಿಗೆ ಕಾರಣವಾಗಿತ್ತು. 2009ರ ಸೆಪ್ಟೆಂಬರ್ 9ರಂದು ನಡೆದ ಈ ಘಟನೆಯ ಬಗ್ಗೆ ಬಿ.ಬಿ.ಎಂ.ಪಿಯಲ್ಲಿ ಯಾವುದೇ ದಾಖಲೆಗಳೂ ಇಲ್ಲಾ. ಆದರೆ, ಪೋಲೀಸರ ವರದಿ ಪ್ರಕಾರ ಜೆಲ್ಲಿ ಮತ್ತು ಸಿಮೆಂಟ್ ಸರಿಯಾಗಿ ಬಳಸಿಲ್ಲದ ಕಾರಣ ಅಂಡರ್ ಪಾಸಿಗೆ ಆಧಾರವಾಗಿ ಅಳವಡಿಸಿದ್ದ ಪ್ರೀಕಾಸ್ಟ್ ಎಲಿಮೆಂಟ್ ಸಂಕುಚಿತವಾಗಿ ದುರ್ಘಟನೆಗೆ ಸಾಕ್ಷಿಯಾಗಿದೆ. ಇದೂವರೆಗೂ ಗುತ್ತಿಗೆದಾರನ ಬಗೆಗೆ ಯಾವುದೇ ರೀತಿ ತಲೆಕೆಡಿಸಿಕೊಂಡಿಲ್ಲಾ.

ಇತ್ತೀಚಿಗೆ ಧರ್ಮರಾಯಸ್ವಾಮಿ ವಾಡರ್್ನ ದಾಸಪ್ಪ ಆಸ್ಪತ್ರೆ ಆವರಣದಲ್ಲಿ ಮೇಯರ್ ನಟರಾಜ್ರವರು ಭೇಟಿ ನೀಡಿದಾಗ ಬೆಳಕಿಗೆ ಬಂದಂತಹ ದಿಗ್ಭ್ರಮೆ ಮೂಡಿಸುವಂತ ಸತ್ಯವೆಂದರೆ, ಜಿ.ಮಂಜುನಾಥ್ ಎಂಬ ಕಂಟ್ರಾಕ್ಟರ್ ಒಂದೇ ಅಂತಸ್ತಿನಲ್ಲಿ ಮಳಿಗೆ ಕಟ್ಟಲು ಅಂದಾಜು ಮೊತ್ತ 20 ಲಕ್ಷಕ್ಕಿಂತ ಹೆಚ್ಚುವರಿ 5.5ಲಕ್ಷ ರೂಗಳನ್ನು ಅಂದರೆ 25.5ಲಕ್ಷ ರೂಗಳನ್ನು ಪಡೆದಿದ್ದಾನೆ. ಹಾಗೂ ಆಸ್ಪತ್ರೆಯ ಒಳಗಡೆ ಕಾಂಕ್ರೀಟ್ ಹಾಕಲು ಮತ್ತು ವಾಡರ್ಿನ ಕಛೇರಿಯ ಕಾಂಪೌಂಡ್ ಕಟ್ಟಿ, ಝೋರಿಯಲ್ ರೋಡಿನ ಬಳಿ ಚರಂಡಿ ಮತ್ತು ಅಭಿವೃದ್ಧಿ ಕೆಲಸಗಳಿಗಾಗಿ ಪ್ರತ್ಯೇಕ 21.9ಲಕ್ಷರೂ ಹಾಗು 22ಲಕ್ಷ ರೂಗಳನ್ನು ಶಂಕರ್ ಎಂಬ ಗುತ್ತಿಗೆದಾರ ಪಡೆದಿದ್ದಾನೆ. ಆದರೆ, ಅಚ್ಚರಿ ಮೂಡಿಸಿದ್ದೇನೆಂದರೆ ಆ ಜಾಗದಲ್ಲಿ ಕಿಟಕಿ, ಬಾಗಿಲು, ವೈಯರಿಂಗ್ ಎಂತದ್ದೂ ಆಗಿಲ್ಲ ಮತ್ತು ಕಾಂಪೌಂಡನ್ನು ವಾರ್ಡನ ಸುತ್ತಾ ಎಲ್ಲೋ ಕಾಣದಾಗಿದೆಯೆಂಬಂತೆ ಹುಡುಕಾಡಿದರೂ ಸಿಗಲಿಲ್ಲ. ಹಾಗಾದರೆ ಇಲ್ಲಿ ಯಾವುದೇ ಕಾಮಗಾರಿಗಳು ನಡೆದಿಲ್ಲ ಕೇವಲ ಮೇಲುಸ್ತುವಾರಿಯ ನಾಟಕ ನಡೆದು ಎಂಜಿನಿಯರ್ ಮೋಹನ್ ಪೂರ್ಣ 69.5ಲಕ್ಷ ರೂಗಳ ಬಿಲ್ಗಳನ್ನು ಕ್ಲಿಯರ್ ಮಾಡಿರುವುದು ಗಮನಕ್ಕೆ ಬಂದಿದೆ. ಕೆಲಸವೇ ಆಗದೆ ಬಿಲ್ ಕ್ಲಿಯರ್ ಆದದ್ದು ಮೇಯರ್ ನಟರಾಜರ ಕಣ್ಣುಕೆಂಪಾಗಿಸಿದೆ ತಕ್ಷಣದಿಂದಲೇ ಎಂಜಿನಿಯರ್ನನ್ನು ಅಮಾನತಿನಲ್ಲಿಡಲಾಗಿದೆ. ಆ ಎಂಜಿನಿಯರ್ ಇದೂವರೆಗೂ ಕಣ್ಣಿಗೆ ಬಿದ್ದಿಲ್ಲ.

ಬಿ.ಬಿ.ಎಂ.ಪಿಯ ಮುಖ್ಯ ಎಂಜಿನಿಯರ್ ಆಗಿರುವ ಚಿಕ್ಕರಾಯಪ್ಪ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿದ್ದಾಗ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿತ್ತೆಂಬುದರ ವಿರುದ್ಧ ಲೋಕಾಯುಕ್ತರು ಸಕರ್ಾರಕ್ಕೆ ಪತ್ರ ಬರೆದಿದ್ದರು. ಇದರಂತೆ 2007ರ ನವೆಂಬರ್ 26ರಂದು ಸರಕಾರದ ಆದೇಶ ಹೊರಬಿದ್ದಿತ್ತು. ಆದರೆ, ಇದರಿಂದ ಯಾವುದೇ ಕ್ರಮವೂ ತೆಗೆದುಕೊಂಡಂತಿಲ್ಲ. ಇಂತಹ ಎಷ್ಟೋ ಆದೇಶಗಳು ಧೂಳು ತಿನ್ನುತ್ತ ಕುಳಿತಿವೆ. ಇದಕ್ಕೆ ಸಾಕ್ಷಿಯೆಂಬಂತೆ, ಬಿ.ಬಿ.ಎಂ.ಪಿ ಆಯುಕ್ತರಿಗೆ ಮೇ11 ಹಾಗೂ ಮೇ25 ರಂದು ಸಚಿವ ಅಶೋಕ್ ಕಳಹಿಸಿದ್ದ ಟಿಪ್ಪಣಿಯ ಬಗೆಗೆ ಯಾವುದೇ ಕ್ರಮವನ್ನೂ ಇದುವರೆಗೆ ಕೈಗೊಂಡಿಲ್ಲ. ಕಾಮಗಾರಿಯನ್ನು ಪರಿಶೀಲಿಸದೆ ಬಿಲ್ ಪಾವತಿಸಬೇಡಿ ಹಾಗೂ ಈ ಕೆಳಗಿನ ಕಂಟ್ರಾಕ್ಟರ್ಗಳ ಕಾಮಗಾರಿಯ ಬಗೆಗೆ ದೂರುಗಳು ಬಂದಿದ್ದು ಇವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಪಟ್ಟಿ ಇಂತಿದೆ:
1. ವೆಂಕಟೇಶ್ವರ ಕನ್ಸ್ಟ್ರಕ್ಷನ್ ಕಂಪನಿಯ ಎಂ.ಎಸ್.ವೆಂಕಟೇಶ್
2. ವೃಷಭಾಧ್ರಿ ಕನ್ಸ್ಟ್ರಕ್ಷನ್ ಕಂಪನಿಯ ಮುನಿರತ್ನಂ ನಾಯ್ಡು
3. ಮಾರಪ್ಪ ನಾಯ್ಡು
4. ಜಯರಾಂ
5. ಮೈಲೇಗೌಡ
ಇವರ ಮೇಲೆ ಸಿವಿಲ್ ಏಡ್ ಅಥವಾ ಟಾರ್ಸ್ಟೀಲ್ನಿಂದ ತನಿಖೆ ನಡೆಸಿ ವರದಿ ಸಲ್ಲಿಸಿ ಎಂದು ಸೂಚಿಸಲಾಗಿದೆ. ಆದರೆ, ಇನ್ನೂ ಯಾವುದೂ ಸಿದ್ದವಾಗಲಿಲ್ಲ. ಅಧಿಕಾರಿಗಳು ಎತ್ತಂಗಡಿಯಾಗಬಹುದೆಂಬ ಭಯದಿಂದ ಆದೇಶಗಳನ್ನು ಮೂಲೆಗುಂಪು ಮಾಡುತ್ತಿದ್ದಾರೆ, ಸೂಚನೆಗಳನ್ನು ಮುಚ್ಚಿಡಲಾಗುತ್ತಿದೆ ಹಾಗು ಕಡತಗಳೇ ಕಾಣೆಯಾಗುತ್ತಿವೆ ಎಂಬ ಸುದ್ಧಿ ಹೊರಬಿದ್ದಿದೆ.

* ಮುನಿರತ್ನರ ಮಾತು....
ಕಾಂಗ್ರೆಸ್ ಪಕ್ಷದಿಂದ ಯಶವಂತಪುರ 37ನೇ ವಾರ್ಡ್ನಿಂದ ಕಾರ್ಪೋರೆಟರಾಗಿ ಆಯ್ಕೆಯಾಗಿರುವ ಮುನಿರತ್ನಂ ನಾಯ್ಡು ವಿರೋಧ ಪಕ್ಷದಲ್ಲಿದ್ದು 'ನಾಯಿ-ನೀರಿನ ವಿಚಾರದಲ್ಲಿ ತಮ್ಮ ವಿಶಿಷ್ಟ ಮಾತಿನಿಂದ ವಿಶೇಷ ಕೌನ್ಸಿಲ್ ಸಭೆ ಹಾಗು ಮಾಸಿಕ ಸಭೆಗಳಲ್ಲಿ ಗಮನ ಸೆಳೆಯುತ್ತಿದ್ದರು. ಆದರೆ, ಈ ಘಟನೆಗೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದರೆ ನನಗೂ ಇದಕ್ಕೂ ಸಂಬಂಧವೇ ಇಲ್ಲವೆಂದು ಮತ್ತು ತಾನು ರಾತ್ರೋರಾತ್ರಿ ನಡೆಯುತ್ತಿದ್ದ 3,400 ಕೋಟಿ ರೂಗಳ ಕಾಮಗಾರಿಗಳ ಟೆಂಡರ್ ಹಗರಣವನ್ನು ಬಯಲಿಗೆಳೆದ ಕಾರಣ ತನ್ನ ಮೇಲೆ ಈ ಆರೋಪವನ್ನು ವಹಿಸಲಾಗಿದೆ ಎಂದು ಹೇಳಿದ್ದರು. ತದನಂತರದಲ್ಲಿ ಮಾಧ್ಯಮದವರ ಮುಂದೆ ವೀರಾವೇಷದಿಂದ 'ನನ್ನ ಮೇಲಿನ ಆರೋಪ ಸಾಬೀತಾದರೆ, ನನ್ನ ಸ್ಥಾನಕ್ಕೆ ರಾಜಿನಾಮೆ ಕೊಡುತ್ತೇನೆ ಹಾಗು ಮೃತರ ಕುಟುಂಬಕ್ಕೆ 1 ಕೋಟಿ ರೂ ಪರಿಹಾರ ಧನವನ್ನು ನನ್ನ ಕೈಯಿಂದ ಕೊಡಿಸುತ್ತೇನೆ' ಎಂದು ಹೇಳಿಕೆ ನೀಡಿದ್ದರು. ಆದರೆ, ಮೇಯರ್ ರಚಿಸಿದ್ದ ಸಮಿತಿಯ ವರದಿ ಬಂದಿದ್ದು, ಅದರಲ್ಲಿ ಮುನಿರತ್ನರ ಆರೋಪ ಸಾಬೀತಾಗಿದೆ. ಈಗ ಮುನಿರತ್ನ ತನ್ನ ವರಸೆಯನ್ನು ಬದಲಿಸಿಕೊಂಡಿದ್ದು, 'ನಾನು ನ್ಯಾಯಾಲಯದ ಆದೇಶಕ್ಕೆ ಸದಾ ತಲೆಬಾಗುತ್ತೇನೆ' ಎನ್ನುತ್ತಾ ಹಿಂದೆ ಹೇಳಿದ್ದ ಹೇಳಿಕೆಗಳನ್ನು ಧೂಳೀಪಟವನ್ನಾಗಿಸಿದ್ದಾರೆ. ಅಷ್ಟೇ ಅಲ್ಲದೇ 'ಗುಣಮಟ್ಟದ ಬಗ್ಗೆ ಯಾರೂ ನನ್ನನ್ನು ಕೇಳಲಿಲ್ಲ, ನಾನೂ ಏನೂ ಹೇಳಲಿಲ್ಲ' ಎಂದೂ ಹಾಗು ನಾನು ಇದೂವರೆಗೂ ಹಣವನ್ನು ಪಡೆದೇ ಇಲ್ಲವೆಂಬ ಬೇಜವಾಬ್ದಾರಿ ಮಾತುಗಳನ್ನಾಡಿದ್ದಾರೆ. ಮೃತಳ ತಂದೆ-ತಾಯಿ ತಪ್ಪಿತಸ್ಥರಿಗೆ ಶಕ್ಷೆಯಾಗಬೇಕೆಂದು ಪಣತೊಟ್ಟಿದ್ದು, ಲೋಕಾಯುದ್ತರಿಗೆ ದೂರನ್ನು ಸಲ್ಲಿಸಿದ್ದಾರೆ, ಹಾಗು ಇದರಲ್ಲಿ ನ್ಯಾಯ ಸಿಗದಿದ್ದರೆ, ನ್ಯಾಯಾಲಯದ ಮೆಟ್ಟಿಲೇರಿ ಹೋರಾಟ ನಡೆಸುತ್ತೇವೆ ಎಂಬ ಸಂಕಲ್ಪ ಮಾಡಿದ್ದಾರೆ. ಮುನಿರತ್ನ ಫೋನಿನ ಮೂಲಕ ಧಮಕಿ ಹಾಕಿರುವುದು ತನ್ನ ತಪ್ಪಿನಿಂದ ಜಾರಿಕೊಳ್ಳುವ ಪ್ರಯತ್ನವಾಗಿದೆ.
ಈ ಸಂದರ್ಭದಲ್ಲಿ ಬ್ಯಾಂಕಿನ ಒಂದು ಘಟನೆ ನೆನಪಿಗೆ ಬರುತ್ತದೆ. ಒಬ್ಬ ತಾನು ಬಾವಿತೋಡಿಸುವುದಾಗಿ, ಬ್ಯಾಂಕಿನಲ್ಲಿ ಅರ್ಜಿ ಹಾಕಿ ಸಾಲ ಪಡೆದು, ಬಾವಿಯ ಕೆಲಸಗಳ ವರದೆಯನ್ನು ಆಗಾಗ್ಗೆ ಸಲ್ಲಿಸುತ್ತಾ ಹಣವನ್ನು ಬಿಡುಗಡೆ ಮಾಡಿಸಿಕೊಳ್ಳುತ್ತಿದ್ದ. ಆ ಕೆಲಸವು ಇನ್ನೇನು ಮುಗಿಯುವ ಹಂತದಲ್ಲಿದೆ ಎಂದು ತಿಳಿಸಿದ್ದ ಸಾಲಗಾರ ಕೆಲವು ದಿನಗಳ ಬಳಿಕ ಬಂದು, ನನ್ನ ಬಾವಿಯು ಎಲ್ಲೋ ಕಾಣೆಯಾಗಿ ಹೋಗಿದೆ, ಎಷ್ಟು ಹುಡುಕಿದರೂ ಸಿಗುತ್ತಿಲ್ಲವೆಂದು ದೂರು ನೀಡುತ್ತಾನೆ. ಆಗ ಅವನಿಂದ ಲಂಚ ಪಡೆದು ಸಹಿ ಹಾಕಿದ್ದ ಫೀಲ್ಡ್ಆಫೀಸರ್ ಕಕ್ಕಾಬಿಕ್ಕಿಯಾಗಿ ತನ್ನ ಕೆಲಸ ಕಳೆದುಕೊಂಡಿದ್ದ. ಇಂತಹ ಎಷ್ಟೋ ಅಧಿಕಾರಿಗಳು ಬಿ.ಬಿ.ಎಂ.ಪಿ.ಯಲ್ಲಿದ್ದಾರೆ, ಹಾಗೇ ಮುನಿರತ್ನರಂತಹ ಕಾಂಟ್ರಾಕ್ಟರುಗಳೂ ಲೆಕ್ಕಕ್ಕಿಲ್ಲ. ಈಗ ಕಳಪೆ ಕಾಮಗಾರಿ ಮಾಡುತ್ತಿರುವವರು ಮುಂದೊಂದು ದಿನ ಈ ಘಟನೆಯ ಪ್ರೇರಣೆ ಪಡೆದು 'ನಾವು ಕಾಮಗರಿ ನಡೆಸಿದ್ದೆವು, ಆದರೆ ಯಾರೋ ಅದನ್ನ ಅಪಹರಿಸಿದ್ದಾರೆ' ಎಂದು ಪ್ರತಿದೂರನ್ನು ನೀಡುವ ಸಂಭವವನ್ನು ತೆಗೆದು ಹಾಕುವಂತಿಲ್ಲ.

* ವರದಿ ಹೀಗಿದೆ:
ಬಿ.ಬಿ.ಎಂ.ಪಿಯ ಮುಖ್ಯ ಎಂಜಿನಿಯರ್ 'ದೇವರಾಜ್'ರ ನೇತೃತ್ವದಲ್ಲಿ ರಚನೆಯಾಗಿದ್ದ ಸಮಿತಿಯು ಬುಧವಾರ ಮೇಯರ್ ಎಸ.ಕೆ.ನಟರಾಜ್ರವರ ಮುಂದೆ ವರದಿಯನ್ನು ಇಟ್ಟಿದೆ. ಮಳೆಯಿಂದ 22 ಮೀಟರನಷ್ಟು ಗೋಡೆ ಕುಸಿದಿದ್ದು, ಇದನ್ನು ಒಂದೂವರೆ ಅಡಿಯಷ್ಟು ಎತ್ತರದ ಪೈಪಿನ ಮೇಲೆ ನಿಮರ್ಿಸಿರುವುದು ಬೆಳಕಿಗೆ ಬಂದಿದೆ. ಒಟ್ಟು 4.45 ಮೀಟರ್ ಎತ್ತರವಿರುವ ಗೋಡೆಗೆ ಕನಿಷ್ಟ ಎರಡೂವರೆ ಮೀಟರ್ನಷ್ಟು ಪಾಯದ ಅವಶ್ಯಕತೆ ಇದೆ. ಆದರೆ, ಇಲ್ಲಿ ಎರಡು ಮೀಟರ್ ಪಾಯವೂ ಇಲ್ಲದಿರುವುದು ಕಂಡುಬಂದಿದೆ ಹಾಗೂ ಸಿಮೆಂಟ್, ಮರಳು, ಜೆಲ್ಲಿಯ ಮಿಶ್ರಣವನ್ನು 1:4:8 ರ ಅನುಪಾತದಲ್ಲಿ ಉಪಯೋಗಿಸಿಲ್ಲವಾದ್ದರಿಂದ, ಇದು ಕಳಪೆ ಗುಣಮಟ್ಟದ ಕಾರ್ಯವೆಂದು ಸಾಬೀತಾಗಿದೆ. ಕಾಂಪೌಂಡ್ ಕಟ್ಟಲು ಬಾಂಡ್ ಕಲ್ಲುಗಳನ್ನು ಉಪಯೋಗಿಸಬೇಕಿತ್ತು, ಕಲ್ಲನ್ನು ಇಂಟರ್ಲಾಕ್ ಸಿಸ್ಟಮ್ ಬಳಸಿ ಕಟ್ಟಬೇಕಿತ್ತು ಹಾಗೂ ಕಲ್ಲುಗಳ ಮಧ್ಯೆ ಒಳಗೆ 1:6 ಮತ್ತು ಹೊರಗೆ 1:3ರ ಅನುಪಾತದಲ್ಲಿ ಸಿಮೆಂಟ್ ಮರಳು ಮಿಶ್ರಣವನ್ನು ತುಂಬಬೇಕಿತ್ತು. ಇದ್ಯಾವುದೂ ಆಗದೆ ಕಲ್ಲಿನ ಮಧ್ಯೆ ರಂಧ್ರಗಳು ಉಂಟಾಗಿದೆ, ಅಷ್ಟೇ ಅಲ್ಲದೆ ಉಳಿದ ಗೋಡೆಯೂ ಈಗಾಗಲೇ ಬಿರುಕುಬಿಟ್ಟಿದ್ದು, ಇನ್ನೇನು ಉರುಳುವ ಎಣಿಕೆಯಲ್ಲಿದೆ. ಈ ವರದಿಯಿಂದ ತಿಳಿದು ಬಂದ ಪ್ರಮುಖ ಅಮಶವೆಂದರೆ,
ಅಂದಾಜು ಪಟ್ಟಿಯನ್ನು ಸರಿಯಾಗಿ ತಯಾರಿಸಿಲ್ಲ.
ಕಾಮಗಾರಿಯ ನಿರ್ಮಾಣದ ನಕ್ಷೆಯನ್ನೇ ತಯಾರಿಸಿಲ್ಲ.
ಕಾಮಗಾರಿಗಳಿಗೆ ಮೆಲ್ವಿಚಾರಣೆ ಮತ್ತು ತಪಾಸಣೆ ಮಾಡಿರುವುದಿಲ್ಲ
ಮೇಲ್ಭಾಗದ ನೀರು ಆಚೆ ಹರಿದು ಹೋಗಲು ಸಣ್ಣ-ಸಣ್ಣ ಕಿಂಡಿಗಳನ್ನು ನಿರ್ಮಾಣ ಮಾಡಿಲ್ಲದ್ದು ಗೋಡೆಯು ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

ಮೇಯರ ನಟರಾಜ ಹೇಳಿರುವ ಪ್ರಕಾರ ತಮಗೆ ಯವುದೇ ಕ್ರಮವನ್ನು ಕೈಗೊಳ್ಳುವ ಅಧಿಕಾರವಿಲ್ಲ. ಈ ವರದಿಯನ್ನು ಎಲೆಕ್ಷನ್ ಕಮಿಷನ್ರಿಗೆ, ಕೋಟರ್ಿಗೆ ಹಾಗು ಉಸ್ತುವಾರಿ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳುತ್ತಾರೆ. ಹಾಗೂ ಸಚಿವ ಅಶೊಕ್ರವರ ಟಿಪ್ಪಣಿಗಳ ಬಗೆಗೆ ಗಮನಹರಿಸುತ್ತೇವೆ. ಆದರೆ, ಈ ಹಿಂದೆ ನಡೆದಿರುವ ಕಾಮಗಾರಿಗಳ ಕಳಪೆ ಮಟ್ಟವನ್ನು ಪರಿಶೀಲಿಸುವುದು ಅಷ್ಟು ಸುಲಭದ ಮಾತಲ್ಲ ಎಂದೂ ಸೇರಿಸಿದ್ದಾರೆ.

ಈ ಘಟನೆಗಳು, ವರದಿಗಳು, ವಾದ-ವಿವಾದಗಳು ಏನೇ ಹೇಳಿದರೂ, ಸಂಜನಾಳಂತಹ ಮುಗ್ಧ ಜೀವ ಬಲಿಯಾಗಿರುವುದು ನಿಜ. ಇಂತಹ ದುರ್ಘಟನೆಗಳಿಂದ ಬಿ.ಬಿ.ಎಂ.ಪಿ.ಯವರ ಕೆಲಸಗಳೆಂದರೆ ಜನ ಭಯ-ಭೀತರಾಗಿದ್ದಾರೆ, ರಸ್ತೆಯಲ್ಲಿ ಓಡಾಡಲೂ ಹಿಂದು-ಮುಂದು ನೋಡುವಂತಾಗಿದೆ. ಹಾಗಾದರೆ, ಅಧಿಕಾರಿಗಳು, ಕಂಟ್ರಾಕ್ಟರ್ಗಳು, ಕಾರ್ಪೋರೇಟರ್ಗಳು ಮನುಷ್ಯತ್ವವನ್ನೇ ಕಳೆದುಕೊಂಡು ಮೃಗಗಳಾಗಿದ್ದಾರಾ? ಎಂಬಂತಹ ಪ್ರಶ್ನೆಗಳು ಕಾಡತೊಡಗುತ್ತವೆ.




=

Sunday, June 13, 2010

ಮ್ಯಾಂಗೋ ಪಾರ್ಟಿ












ಬಾದಾಮಿ, ಮಲಗೋಬ, ರಸಪುರಿ, ಸೇನ್ದೂರ, ನೀಲಂ, ಮಲ್ಲಿಕಾ, ತೋತಾಪುರಿ, ....ಅದೂ-ಇದೂ...,ಯಾವುದು ಬೇಕು,ಎಷ್ಟು ಬೇಕು, ಅಷ್ಟೂ ತಿನ್ನೋ ಸ್ವಾತಂತ್ರ್ಯಯಿದ್ದದ್ದು ಭಾನುವಾರ ರಂಗಶಂಕರದಲ್ಲಿ. ನಾಟಕ ತಂಡಗಳ ನೆಚ್ಚಿನ ತಾಣದಲ್ಲಿ ಹೊಸಲೋಕವೇ ಸೃಷ್ಟಿಯಾಗಿತ್ತು, ಅದೇ ಮಾವಿನ ಮಾಯಾ ಲೋಕ. ಇಲ್ಲಿ ತಿನ್ನೋಕೆ ಕೊಡಬೇಕಾಗಿಲ್ಲ ಕಾಸು ಆದರೆ, ಬರುವಾಗ ಹಿಡಿದು ತಂದರೆ ಸಾಕು ಒಂದು ಕಿ.ಲೋ. ಮಾವಿನ ಸರಕು. ತಂದ ಹಣ್ಣನ್ನು ಊರಗಲ ಬಾಯಿ ತೆರೆದ ಬಟ್ಟಲಲ್ಲಿ ಮುಳುಗಿಸೋದು ಅಷ್ಟೇ..! ಆನಂತರ ನೀವು ತಂದದ್ದು ಅದ್ಯಾರ ಚಪ್ಪರಿಸುವ ಬಾಯಲ್ಲೋ, ಅವರದು ಇನ್ಯಾರ ಹೊಟ್ಟೆಯಲ್ಲೋ ಹೀಗೆ..ಮನಸೋಯಿಚ್ಚೆ ಸಿಹಿ-ಹುಳಿ ಮಿಶ್ರಣದ ಆಸ್ವಾದವನ್ನು ಅನುಭವಿಸಿದ ಹಿರಿ-ಕಿರಿ ಬಾಯಿಗಳು.

ನೆರೆದಿದ್ದ ರಂಗಭೂಮಿಯ ಕಲಾವಿದರ ದ೦ಡಿಗಿ೦ತ ಪ್ರಮುಖ ಆಕರ್ಷಣೆ ಎನಿಸಿದ್ದು ಪುಟಾಣಿಗಳ ಕಿಲಕಿಲ ನಗು, ಓಡಾಟ, ಕೈಗಿಂತ ದೊಡ್ಡ ಹಣ್ಣನ್ನು ಹಿಡಿದು ಓಡುತಿದ್ದದ್ದು..ಇವನ್ನೆಲ್ಲಾ ನೋಡಿಯೇ ಅನುಭವಿಸಬೇಕು. ಯಾರೂ
ದೊಡ್ಡಸ್ತಿಕೆ ತೋರದೆ ಎಲ್ಲರೊಂದಿಗೊಂದಾಗಿ ರಸವನ್ನ ಸೊರ್ರೆಂದು ಸೆಳೆದುಕೊಂಡದ್ದು ನೆನಪಿನಂಗಳದಲ್ಲಿ ಉಳಿಯುತ್ತದೆ. ಯುವಕರ ಹಾಗೂ ಮಕ್ಕಳ ಗುಂಪು ಈ ಕೂಟಕ್ಕೆ ಮೆರುಗನ್ನು ನೀಡಿತು, ಯುವಕರು ಸ್ನೇಹಿತರನ್ನ ಹುಡುಕುತ್ತ ಗುಂಪಾಗಿ ಸೇರಿ ಅಣಗಿಸುತ್ತಾ, ಫೋಟೋತಗಿಯುತ್ತ ತಮ್ಮ ಬಾಲ್ಯದ ನೆನಪಿಗೆ ಜಾರಿದರೆ, ಚಿಂಟಾರಿಗಳು ದೊಡ್ಡವರ ಮಾತುಗಳನ್ನು ಆಲಿಸುತ್ತ, ಹೇಳಿಕೊಟ್ಟ ಹಾಡನ್ನು ಹಾಡುತ್ತ ಕುಪ್ಪಳಿಸಿದರು. ಅಷ್ಟೇ ಅಲ್ಲದೆ ಮಕ್ಕಳಿಗಾಗೆ ಅನೇಕ ಸ್ಪರ್ದೆಗಲಿದ್ದವು ವಿವಿಧ ಮಾವಿನ ಹೆಸರನ್ನು ಹೇಳೋದು, ಕತ್ತರಿಸಿದ ಹಣ್ಣನ್ನು ದಾರಕ್ಕೆ ಕಟ್ಟಿ ಜೊತೆಗೆ ತಮ್ಮ ಕೈಗಳನ್ನು ಹಿಂದೆ ಕಟ್ಟಿ ನಿಮಿಷದಲ್ಲಿ ತಿಂದು ಮುಗಿಸೋದು, ಮಾವಿನ ಬಗ್ಗೆ ರಸಪ್ರಶ್ನೆ, ಅಲ್ಲೇ ಸೃಷ್ಟಿ ಮಾಡುತ್ತಿದ್ದ ಮಾವಿನ ಕತೆಗಳು, ಹಾಡುಗಳು ಎಲ್ಲರನ್ನು ನಗೆಯ ಕಡಲಿನಲ್ಲಿ ತೇಲಿಸಿದ್ದವು. ಸುಮಾರು ನಾಲ್ಕು ವರ್ಷಗಳಿಂದ ರಂಗಶಂಕರದಲ್ಲಿ ಈ ಪಾರ್ಟಿ ನಡೆಯುತ್ತ ಬಂದಿದೆ. ಅರುಂದತಿ ನಾಗ್, ಗಿರೀಶ್ ಕಾರ್ನಾಡ್, ನಾಗಾಭರಣ, ಎಂ.ಡಿ.ಪಲ್ಲವಿ, ಹೀಗೆ ಅನೇಕರು ಮ್ಯಾಂಗೋ ಪಾರ್ಟಿಗೆ ಸಾಕ್ಷಿಯಾದರು.

ಅಂತು ಬೆಂಗಳೂರಿಗರ ವೀಕೆಂಡ್ ಮಸ್ತಿಗೆ ಹೊಸ ಅನುಭವದ ಬುತ್ತಿ.


ಬಿಹಾರದಲ್ಲಿ ಬೆಂಗಳೂರಿನ ಬಿಸಿನೆಸ್ ಮ್ಯಾನ್

ಸೋಮವಾರ ಮಧ್ಯಾಹ್ನ ಬಿಹಾರ ರಾಜಕೀಯ ಕ್ಷೇತ್ರದಲ್ಲಿ ತಲ್ಲಣ ಉಂಟು ಮಾಡಿದವರು ಬೆಂಗಳೂರಿನ ಬಿಸಿನೆಸ್ ಮ್ಯಾನ್ ಉದಯ್ ಬಿ. ಗರುಡಾಚಾರ್. ಉದಯ್ ರಾಜ್ಯ ಸಭೆಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧೆಯೊದ್ದಳು ನಾಮಪತ್ರ ಸಲ್ಲಿಸುತ್ತಿದ್ದಂತೆ ಲಾಲೂ ಪ್ರಸಾದರ ಹಿಂಬಾಲಕರು ಕಕ್ಕಾಬಿಕ್ಕಿಯಾಗಿದ್ದಾರೆ. ಬಿಹಾರದ ಮಾಧ್ಯಮಗಳೂ ಸೇರಿದಂತೆ ಅನೇಕ ರಾಜಕಾರಣಿಗಳು ಈತ ಯಾರು? ಎಲ್ಲಿದ್ದ? ಎಲ್ಲಿಂದ ಬಂದ? ಏಕೆ ಇಲ್ಲಿಗೆ ಬಂದ?...ಅನ್ನೋ ಪ್ರಶ್ನೆಗಳ ಗಂಟು ಹಿಡಿದು ಉತ್ತರವನ್ನು ಸಂಶೋಧಿಸಲು ಹೊರಟ್ಟಿದ್ದಾರೆ. ಈ ಆಗು-ಹೋಗಿನ ಬಗ್ಗೆ ಒಂದು ಸಂಕ್ಷಿಪ್ತ ನೋಟವನ್ನು ಹರಿಬಿಡೋಣ...

*ಹಿನ್ನೆಲೆ:
ಬೆಂಗಳೂರಿನಲ್ಲಿರುವ ಪ್ರಮುಖ ಮಾಲ್ಗಳಲ್ಲಿ ಒಂದೆನಿಸಿರುವ 'ಗರುಡಾಮಾಲ್'ನ ಒಡೆಯರಾದ ಉದಯ್ ಬಿ.ಗರುಡಾಚಾರ್. ಇವರು ಕರ್ನಾಟಕದ ಮಾಜಿ ಮಹಾನಿರ್ದೇಶಕರಾದ ಬಿ.ಎನ್.ಗರುಡಾಚಾರ್ರವರ ಪುತ್ರ. ಗರುಡಾ ಬಿಲ್ಡರ್ಸ್ನ ಮಾಲಿಕರಾಗಿರುವ ಉದಯ್ ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿ. ಕರ್ನಾಟಕದಲ್ಲಿ ಹುಟ್ಟಿ ಬೆಳೆದವ ಬಿಹಾರದ ಮೇಲ್ಮನೆಯನ್ನು ಸೇರಬಯಸಿರುವುದು ಹಲವರ ಹುಬ್ಬೇರಿಸುವಂತೆ ಮಾಡಿದೆ. ಕರ್ನಾಟಕದಲ್ಲಿ ಬಿ.ಜೆ.ಪಿ ಪಕ್ಷದ ಬೆಂಬಲವಿದ್ದರೂ ಬಿಹಾರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಅಚ್ಚರಿಯ ಸಂಗತಿ. ಅದೂ ಕರ್ನಾಟಕದ ಮಟ್ಟಿಗೆ ಪಕ್ಷೇತರರಾಗಿ ಹೊರರಾಜ್ಯದಲ್ಲಿ ರಾಜ್ಯಸಭೆಯ ಸ್ಥನಕ್ಕೆ ಸೆಣಸಿದವರು ಇದುವರೆಗೂ ಇರಲಿಲ್ಲ.

*ಡೆಡ್ ಲೈನ್:
ಬಿಹಾರದ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನ ಸೋಮವಾರ ಮಧ್ಯಾಹ್ನ 3 ಗಂಟೆಯ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತಿತ್ತು. ಅಷ್ಟರಲ್ಲಿ ದಿಢೀರನೆ ಪಾಟ್ನಾದಲ್ಲಿ ಪ್ರತ್ಯಕ್ಷರಾದ ಉದಯ ಗರುಡಾಚಾರ್ ಪಕ್ಷೇತರ ಶಾಸಕ ದದನ್ಸಿಂಗ್ ಪೆಹಲ್ವಾನ್ರೊಂದಿಗೆ ಹತ್ತು ಜನ ಶಾಸಕರ ಬೆಂಬಲದ ಸಹಿಯಿರುವ ಪತ್ರದೊಂದಿಗೆ ಆಗಮಿಸುವಷ್ಟರಲ್ಲಿ ಸಮಯ ಡೆಡ್ಲೈನಿನ ಹತ್ತಿರಕ್ಕೆ ಬಂದು ನಿಂತಿತ್ತು. ಅಂದರೆ ಇನ್ನೂ ಹದಿನೈದು ನಿಮಿಷಗಳು ಇದ್ದಂತೆ ತಮ್ಮ ನಾಮಪತ್ರವನ್ನು ಸಲ್ಲಿಸಲಾಯಿತು. ಆದರೆ, ಇದಕ್ಕೂ ಮುನ್ನಾ ಆರ್.ಜೆ.ಡಿ ಪಕ್ಷದ ಕಾರ್ಯಕರ್ತರು ಉದಯ್ ಆಗಮಿಸದಂತೆ ಅವರ ಕಾರಿಗೆ ತಡೆ ಒಡ್ಡಿದರು ಹಾಗು ಶಾಸನ ಸಭೆಯಲ್ಲಿ ಸಮಯ ಮುಗಿದಿದೆ ಎಂದು ಘೋಷಣೆಗಳನ್ನು ಕೂಗಿದ್ದರು.

*ಲೆಕ್ಕಾಚಾರ:
241 ಶಾಸಕರನ್ನು ಹೊಂದಿರುವ ಬಿಹಾರದಲ್ಲಿ ಒಟ್ಟು ಐದು ರಾಜ್ಯಸಭಾ ಸ್ಥಾನಗಳಿದ್ದು, ಆಯ್ಕೆಯಾಗಲು ಒಬ್ಬರಿಗೆ ಕನಿಷ್ಟ 41 ಶಾಸಕರ ಬೆಂಬಲಬೇಕು. ಈಗ ಉದಯ್ ಸೇರಿದರೆ ಆರು ಅಭ್ಯರ್ಥಿಗಳು ಸ್ಪರ್ದೆಯಲ್ಲಿದ್ದರೆ , ಉದಯ್ರವರು ನಾಮಪತ್ರ ಸಲ್ಲಿಸದಿದ್ದರೆ ಐದು ಅಭ್ಯಥರ್ಿಗಳು ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು ಹಾಗು ಚುನಾವಣೆಯ ಅಗತ್ಯವೇ ಇರಲಿಲ್ಲ. ಆದರೆ ಈಗ ಕತ್ತಿ ತೂಗುತ್ತಿರುವುದು ಆರ್.ಜೆ.ಡಿ ಮತ್ತು ಎಲ್.ಜೆ.ಪಿ ಪಕ್ಷದ ಎರಡನೇ ಅಭ್ಯಥರ್ಿಯಾದ ರಾಮ್ ಕ್ರಿಪಾಲ್ ಯಾದವ್ ಮೇಲೆ, ಲೆಕ್ಕಾಚಾರಗಳ ಪ್ರಕಾರ ಇವರಿಗೆ 12 ರಿಂದ 14 ಶಾಸಕರ ಮತಗಳ ಕೊರತೆ ಎದುರಾಗಲಿದೆ. ತಾನು ಸೇಫ್ಯೆಂದು ಹೇಳಿಕೊಂಡಿರುವ ಉದಯ್ ಒಟ್ಟು 45 ಶಾಸಕರ ಬೆಂಬಲವಿರುವ ಬಗ್ಗೆ ನಂಬಿಕೆ ಹೊಂದಿದ್ದಾರೆ, ಅದರಲ್ಲಿ 11 ಪಕ್ಷೇತರರು, 10 ಕಾಂಗ್ರೆಸ್ಸಿಗರು, ಬಿ.ಎಸ್.ಪಿ ಮತ್ತು ಸಿ.ಪಿ.ಐನ 5 ಹಾಗೂ ಎನ್.ಡಿ.ಎಯ ಕೆಲವು ಶಾಸಕರಿದ್ದಾರೆ. ಬಿ.ಜೆ.ಪಿಯ ಒಟ್ಟು ಶಾಸಕರ ಸಂಖ್ಯೆ 137 ಆದ್ದರಿಂದ, ಬಿ.ಜೆ.ಪಿಯ ಉಪೇಂದ್ರ ಕುಶುವಾಹಾ ಹಾಗೂ ಜೆ.ಡಿ.ಯುನ ಆರ್.ಸಿ.ಪಿ.ಸಿನ್ಹಾ ಮತ್ತು ರಾಜೀವ್ ಪ್ರತಾಪ್ ರೂಡಿಗೆ ಯಾವುದೇ ಭಯವಿಲ್ಲ. ಲಾಲೂ ಪ್ರಸಾದ್ ಸಾರಥ್ರ್ಯದಲ್ಲಿರುವ ಆರ್.ಜೆ.ಡಿ ಮತ್ತು ಎಲ್.ಜೆ.ಪಿ ಶಾಸಕರು 68, ಇದರಲ್ಲಿ ರಾಮ್ ವಿಲಾಸ್ ಪಾಸ್ವಾನ್ 41 ಶಾಸಕರ ಮತವನ್ನು ಪಡೆಯುವುದು ಪೂರ್ವ ನಿರ್ಧರಿತ. ಆದರೆ, ರಾಮ್ ಕ್ರಿಪಾಲ್ ಯಾದವರ ಸ್ಥಿತಿ ಅಯೋಮಯ. ಇದರ ನಡುವೆ ಗೊಂದಲದಲ್ಲಿ ಸಿಲುಕಿರುವವರು ಕಾಂಗ್ರೆಸ್ಸಿನ ಶಾಸಕರು, ಮೂರು ಶಾಸಕರು ಉದಯ್ ಗರುಡಾಚಾರ್ರ ನಾಮಪತ್ರ ಸಲ್ಲಿಕೆಯ ಸಂದಭದಲ್ಲಿ ಬೆಂಬಲವನ್ನು ಸೂಚಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷವು ಯಾವುದೇ ಪಕ್ಷಕ್ಕೆ ತಮ್ಮ ಬೆಂಬಲವನ್ನು ನೀಡದಂತೆ ಆದೇಶವನ್ನು ಹೊರಡಿಸಿತ್ತು ಹಾಗು ಈಗ 'ವಿಪ್' ಕೂಡಾ ಜಾರಿಮಾಡಿದೆಯೆಂದು ಕಾಂಗ್ರೆಸ್ಸಿನ ಅಧ್ಯಕ್ಷರಾದ ಮೆಹಬೂಬ್ ಅಲಿ ಕೈಸರ್ ತಿಳಿಸಿದ್ದಾರೆ. ಇದು ಅಡ್ಡಗೋಡೆಯ ಮೇಲೆ ದೀಪವನ್ನು ಇಟ್ಟಂತಾಗಿದೆ.

*ಬಿಹಾರವೇ ಏಕೆ?...
ಇದು ಸಾಮಾನ್ಯವಾಗಿ ನಮ್ಮನ್ನು ಕಾಡೋ ಪ್ರಶ್ನೆ, ಬೆಂಗಳೂರನ್ನು ಬಿಟ್ಟು ಬಿಹಾರಕ್ಕೆ ಹೋಗಿದ್ಯಾಕೇಂತಾ..? ಇದಕ್ಕೆ ಉದಯ್ ಗರುಡಾಚಾರ್ ಹೇಳೋದು, "ಜ್ಞಾನದೇಗುಲವೆಂದೇ ಪ್ರಸಿದ್ಧಿಯನ್ನು ಪಡೆದಿದ್ದ ನಾಡು ಬಿಹಾರ, ಇಲ್ಲಿರುವ ಪಾಟಲೀಪುತ್ರದಂತಹ ಅನೇಕ ಐತಿಹಾಸಿಕ ತಾಣಗಳು ಅದಕ್ಕೆ ಸಾಕ್ಷಿ. ಹಾಗೂ ಇಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ರವರ ಕಾರ್ಯಚಟುವಟಿಕೆಗಳ ಬಗ್ಗೆ ನನಗೆ ಗೌರವವಿದೆ ಮತ್ತು ಅದರಿಂದ ಪ್ರಭಾವಿತನಾಗಿದ್ದೇನೆ. ಮುಖ್ಯವಾಗಿ ಬಿಹಾರವೂ ಬೆಂಗಳೂರಿನಂತೆ ಬೆಳೆಯಬೇಕೆಂಬುದು ನನ್ನ ಇಚ್ಛೆ, ಅದಕ್ಕೆ ಬಂಡವಾಳ ಹೂಡಿಕೆದಾರರ ಅಗತ್ಯವಿದೆ ಆ ಕೆಲಸವನ್ನು ನಾನು ಮಾಡಬಲ್ಲೆ ಮತ್ತು ಕರ್ನಾಟಕದಲ್ಲಿ ವಿಜಯ್ ಮಲ್ಯಾರಂತಹ ಅನೇಕರಿದ್ದಾರೆ ಆದಕಾರಣ ನಾನು ಇಲ್ಲಿ ಬಂದಿರೋದು ಅಪರಾಧವೇನಲ್ಲಾ. ಹಾಗೇ ಇದರಿಂದ ಕನ್ನಡಿಗರು ಏನೂ ಎಂಬುದನ್ನು ವ್ಯಕ್ತಪಡಿಸುವ ಅವಕಾಶವೂ ದೊರೆತಿದೆ." ಈ ಕ್ಷೇತ್ರದಲ್ಲಿ ಹಲವು ಕಾರಣಗಳಿಂದಾಗಿ ಉದಯ್ ಗರುಡಾಚಾರ್ ಗೆಲ್ಲುವ ವಿಶ್ವಾಸವಿದೆ. ಅಭ್ಯರ್ಥಿಗಳು ನಾಮಪತ್ರದಲ್ಲಿ ಸೂಚಿಸಿರುವ ಒಟ್ಟು ಆಸ್ತಿಯ ಮೌಲ್ಯದಲ್ಲಿ ಅತೀ ಹೆಚ್ಚು ಉದಯ್ರವರದು(20 ಕೋಟಿ).

* ಹೀಗಿರಬಹುದು...!
# ಒಂದು ಚುನಾವಣೆಯಲ್ಲಿ ಗೆಲ್ಲಲು ಈಗಿನ ಸಂದರ್ಭದಲ್ಲಿ ಕೋಟ್ಯಾಂತರ ಹಣವನ್ನು ಸುರಿಯಬೇಕು, ಆದರೆ ಬಿಹಾರದಂತಹ ಹಿಂದುಳಿದ ರಾಜ್ಯದಲ್ಲಿ ಈ ಖರ್ಚು ಸ್ವಲ್ಪ ಕಡಿಮೆಯೇ ಆಗಬಹುದು.
# ಲಾಲೂ ಪ್ರಸಾದರ ನಿಯಂತ್ರಣಕ್ಕೆ ಅಡ್ಡಿಯೊಡ್ಡಲು ಇಚ್ಚಿಸಿರುವ ಕೆಲವು ಶಾಸಕರ ಬೆಂಬಲ ಉದಯ್ಗೆ ದೊರೆತಿದೆ. ಇದನ್ನು ಬೆಳೆಸಿಕೊಂಡು ಒಬ್ಬ ಅಭ್ಯರ್ಥಿಯನ್ನು ಹಿಂದಿಟ್ಟರೂ ಸಾಕು ಸೀಟು ಗ್ಯಾರಂಟಿ.
# ತಮ್ಮ ಉದ್ಯಮವನ್ನು ಬಿಹಾರದಲ್ಲೂ ಬೆಳೆಸಬೇಕೆಂಬ ಕನಸು ರಾಜ್ಯಸಭೆಯಲ್ಲಿನ ಸ್ಥಾನದಿಂದ ನನಸಾಗಬಹುದು.

ಅಂತೂ ಕನ್ನಡಿಗರೊಬ್ಬರು ಹೊರರಾಜ್ಯದಲ್ಲಿ ತಮ್ಮ ಛಾಪನ್ನು ಮೂಡಿಸಲು ಹೊರಟಿದ್ದಾರೆ. ಈ ನಿರೀಕ್ಷೆಯ ಕುತೂಹಲ ಇದೇ ಜೂನ್ 17ರ ನಂತರ ತಣಿಯಲಿದೆ.

Monday, June 7, 2010

"ಸನ್ಯಾಸಿ ಮೇಲೆ ಶೂಟೌಟ್"
'ಶಾಂತಿದೂತ ಗಾಂಧೀ ತಾತ' ಬಲಿಯಾದದ್ದು ಒಂದು ಸಣ್ಣ ಗುಂಡಿಗೆ, ಬ್ರಿಟೀಷರ ಬುಲೆಟ್ಟಿಗೆ ಎದೆಯೊಡ್ಡಿದ್ದಾ ಭಾರತೀಯರ ನೆತ್ತರು ಹರಿದದ್ದು ಈಗ ಇತಿಹಾಸ. ಜಗತ್ತಿನ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಅಲೆಯೊಂದನ್ನು ಎಬ್ಬಿಸಿದ
ಧೀರ ಸ್ವಾಮಿ ವಿವೇಕಾನಂದ, ಇದನ್ನೇ ಆಧಾರವಾಗಿರಿಸಿಕೊಂಡು 'ಹೆಸರು ಅವರದು, ಬಸರು ನನ್ನದೂ..' ಅನ್ನೋ ಹಾಗೇ ಅಮೇರಿಕಾದವರೆಗೂ ಹಾರಿ ಬಂದಿರೋರು ಅದೆಷ್ಟೋ. ಅಲ್ಲಿ ಇವರುಗಳು ಮಾಡಿದ್ದಾದರೂ ಏನೋ..? ಅದೆಲ್ಲಾ ಗೋಪ್ಯವಾದ ವಿಚಾರಗಳೂ! ಈಗ ನಾನೂ ಯಾರಿಗೇನೂ ಕಮ್ಮಿಯಿಲ್ಲಾಂತ ದೇಶ-ವಿದೇಶಗಳನ್ನು ಸುತ್ತುತ್ತಾ ಬಂದು ತನ್ನನ್ನು ತಾನು 'ಅಹಿಂಸಾವಾದಿ, ಆಧ್ಯಾತ್ಮಿಕ ಅನಂತ ಚೇತನ, ಬಡವರ ಬಂಧು...' ಎಂದು ಬಣ್ಣಿಸಿಕೊಳ್ಳುತ್ತಾ ನಕ್ಸಲರಿಂದ ಹಿಡಿದೂ ಉಗ್ರರವರೆಗೂ ಎಲ್ಲಾ ಹಿಂಸಾತ್ಮಕರನ್ನೂ ತನ್ನ ಸುಮಧುರ ಶಾರೀರಿಕ ವಾಣಿಯಿಂದ ಬಂಧಿಸಿ ಕರೆತರುವುದಾಗಿ ಅಲೆದಾಡಿ ಮುಖಭಂಗವಾದ ನಂತರ ಮತ್ತೆ ಮಾಧ್ಯಮಗಳಲ್ಲಿ ಸುದ್ಧಿಯ ಸರಕಾಗಿರುವ 'ಜೀವನ ಕಲೆಯ ಜನ್ಮದಾತನೆಂದೇ ನಂಬಿರುವ ಶ್ರೀ ಶ್ರೀ.ರವಿಶಂಕರ್ ಗುರೂಜಿಯ ಭವ್ಯ ಕುಟೀರದಲ್ಲಿ ನಡೆದಿದೆ ಶೂಟೌಟ್.

*ನಡೆದದ್ದೇನು...?
ಐ.ಟಿ.-ಬಿ.ಟಿಗಳ ಪರಿಣಾಮ ರಜಾದಿನಗಳಲ್ಲಿ ಎಲ್ಲಾಕಡೆಯಲ್ಲೂ ರಷ್, ಸ್ಟ್ರೆಸ್ ರಿಲೀಸ್ಗೆ ದಾರಿತೋರುವ ಆಶ್ರಮಗಳೂ ಇದರ ಹೊರತಾಗಿಲ್ಲಾ. ಇದಕ್ಕೆ ಆಧಾರವೆಂಬಂತೆ ಕನಕಪುರ ರಸ್ತೆಯಲ್ಲಿ ನಿರ್ಮಾಣಗೊಂಡಿರುವ 'ಆರ್ಟ್ ಆಫ್ ಲಿವಿಂಗ್'(ಎ.ಎಲ್.ಓ)ನಲ್ಲಿ ಮೇ 30, ಭಾನುವಾರದಂದು ಶ್ರೀಶ್ರೀ.ರವಿಶಂಕರ್ ಗುರೂಜಿ ನಡೆಸುವ ಸತ್ಸಂಗ ಕಾರ್ಯಕ್ರಮದಲ್ಲಿ ಜಾತ್ರೆಯಂತೆ ಸೇರಿದ್ದ ಜನಜಂಗುಳಿಯ ಸಂಖ್ಯೆ ಸುಮಾರು ಎಂಟು ಸಾವಿರ. ಶ್ರೀಗಳು ಆರುಗಂಟೆಯ ಸಮಯದಲ್ಲಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಕಾರು ಹತ್ತಿದ ಸಂದರ್ಭದಲ್ಲಿ ಸ್ಫೋಟಕ ಶಬ್ದವೊಂದು ಕೇಳಿ ಬಂದಿದೆ. ಅಷ್ಟಾಗಿ ತಲೆಕೆಡಿಸಿಕೊಳ್ಳದ ಭಕ್ತಾದಿಗಳು ಯಜ್ಞ ಶಾಲೆಯ ಬಳಿ ಹೊರಡುವ ತರಾತುರಿಯಲ್ಲಿದ್ದಾಗ ಚಪ್ಪಲಿ ಬಿಡುವ ಸ್ಥಳದ ಬಳಿ ವಿನಯ್ ಕೊಲ್ಲೂಮಠ್ರ ಎಡ ತೊಡೆಗೆ ಏನೋ ತಾಕಿದ ಅನುಭವವಾಗಿದೆ, ಅದೇನೆಂದು ನೋಡಿದಾಗ ತಮ್ಮ ಪ್ಯಾಂಟಿನಲ್ಲಿ ಒಂದು ರಂಧ್ರವಾಗಿದ್ದನ್ನು ಹಾಗೂ ತೊಡೆಯ ಚರ್ಮದ ಸಣ್ಣ ಭಾಗದಲ್ಲಿ ತರಚಿದಂತೆ ಆಗಿರುವುದನ್ನು ಕಂಡು ಸುತ್ತಾ-ಮುತ್ತಾ ಹುಡುಕಾಡಿದಾಗ ಅವರಿಗೆ ಸಿಕ್ಕಿದ್ದು ಒಂದು ಬುಲೆಟ್. ಈ ಘಟನೆ ನಡೆದಾಗ ಸಮಯ ಸಂಜೆ 6:05. ಆಶ್ರಮದ ಸಿಬ್ಬಂದಿಗೆ ಈ ವಿಷಯ ಮುಟ್ಟಿದರೂ ಅದರಲ್ಲಿ ಏನೂ ವಿಶೇಷವಿಲ್ಲದಂತೆ ವತರ್ಿಸಿದ್ದು ಅನುಮಾನದ ಹುತ್ತವನ್ನು ತೋಡುತ್ತಾ ಸಾಗುತ್ತದೆ. ಆನಂತರ ಸುಮಾರು ಮೂರು ಗಂಟೆಗಳ ಅಂತರದಲ್ಲಿ ಸ್ವಾಮೀಜಿಯ ಆಪ್ತ ಕಾರ್ಯದರ್ಶಿ ಗಿರಿ ಗೋವಿಂದರಿಂದ ಈ ಮಾಹಿತಿ ಪೋಲೀಸರಿಗೆ ರವಾನೆಯಾಗಿದೆ. ಹತ್ತು ಗಂಟೆ ಸುಮಾರಿಗೆ ಆಗಮಿಸಿದ ಪೋಲೀಸ್ ಪಡೆ ಪ್ರಥಮ ತನಿಖೆ ನಡೆಸಿದ ಬಳಿಕ ವಿಧಿ-ವಿಜ್ಞಾನ ಇಲಾಖೆಯ ತಜ್ಞರಾದ ರವೀಂದ್ರ ಸ್ಥಳದಲ್ಲಿ ಪರಿಶೀಲಿಸಿದಾಗ ಗುಂಡು ಕಾರ್ಖಾನೆ ನಿರ್ಮಿತ 0.32ಮಿ.ಮಿ ಪಿಸ್ತೂಲ್ನಿಂದ ಹಾರಿದ್ದು ಹಾಗೂ ಸುಮಾರು ದೂರದಿಂದ ಅಂದರೆ 600 ರಿಂದ 700ಮೀಟರ್ ದೂರದಿಂದ ಮೇಲ್ಮುಕವಾಗಿ ಹಾರಿಬಂದಿರಬಹುದೆಂದು ಊಹಿಸಿದ್ದಾರೆ. ಅಂತೂ ತಲಘಟ್ಟಪುರ ಠಾಣೆಯಲ್ಲಿ 'ಭಾರತೀಯ ದಂಡ ಸಂಹಿತೆ 307ರ ಪ್ರಕಾರ ಕೊಲೆಯತ್ನ ಪ್ರಕರಣವನ್ನು 1959ರ ಶಸ್ತ್ರಾಸ್ತ್ರ ಕಾಯ್ದೆಯಡಿ' ದೂರು ದಾಖಲಿಸಲಾಗಿದೆ.

*ಸೇಲ್ಸ್ಮನ್ ಶ್ರೀಶ್ರೀ...ಆದದ್ದೂ..!
ತಮಿಳುನಾಡಿನ ಅಯ್ಯಂಗಾರಿ ಹುಡುಗ ಬೆಂಗಳೂರಿನ ಎಂ.ಇ.ಎಸ್. ಶಾಲೆಯಲ್ಲಿ ಹಾಗೂ ಸೆಂಟ್ ಜೋಸೆಫ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಕೆಲಸಕ್ಕೆ ಸೇರಿದ್ದು ಜೆ.ಸಿ. ರಸ್ತೆಯಲ್ಲಿರುವ ಒಂದು ಆಟೋ ಮೊಬೈಲ್ ಬಿಡಿಭಾಗಗಳ ಅಂಗಡಿಯಲ್ಲಿ ಸೇಲ್ಸ್ಮನ್ನಾಗಿ. ಕೆಲ ವರ್ಷಗಳ ಬಳಿಕ ಅದ್ಯಾವ ಆಧ್ಯಾತ್ಮದ ಹುಳು ತಲೆಯಲ್ಲಿ ಹೊಕ್ಕಿತೋ, ಅಲ್ಲಿಗೇ ಕೆಲಸವನ್ನು ಬಿಟ್ಟು ಬೆಂಗಳೂರಿನಿಂದ ಹೃಷಿಕೇಶದ ದಾರಿಹಿಡಿದು ಹೊರಟವನಿಗೆ ''ಮಹರ್ಷಿ ಯೋಗಿಯ ಆಶ್ರಯ ದೊರೆತು, ಅನೇಕ ಧ್ಯಾನ ಕ್ರಿಯೆಗಳನ್ನು ಕಲಿತು ಅಲ್ಲೇ 'ಸಹಜ ಧ್ಯಾನ' ಶಿಕ್ಷಕನಾಗಿ ತನ್ನ ಕಾರ್ಯಾರಂಭಿಸಿದ . ಆದರೆ, ಹಲವು ವರ್ಷಗಳ ಸಮಯದಲ್ಲಿ ಕಾರಣಾಂತರಗಳಿಂದ 'ಮಹರ್ಷಿ ಯೋಗಿ' ಹಾಲೆಂಡಿಗೆ ದೌಡಾಯಿಸಿದರು. ಆಗ ಅಲ್ಲಿಂದ ಹಣದೊಂದಿಗೆ ಬೆಂಗಳೂರಿಗೆ ವಾಪಸ್ಸಾದ ರವಿಶಂಕರ್ 1983ರಲ್ಲಿ ವೇದ ಶಾಲೆಯನ್ನು ಆರಂಭಿಸಿಸಲು ಸ್ಥಳಬೇಕು ಹಾಗಾಗಿ ಲೀಸಿಗಾಗಿ ಜಮೀನು ನೀಡಬೇಕೆಂದು 'ಹೆಗಡೆ' ಸಕರ್ಾರವನ್ನು ಒತ್ತಾಯಿಸಿದಾಗ ಕನಕಪುರ ರಸ್ತೆಯ ಊದಿಪಾಳ್ಯದ ಗೋಮಾಳದ ಸರ್ವೇ ನಂ.46ರರ ಅರವತ್ತು ಎಕರೆ ಜಮೀನನ್ನು 30 ವರ್ಷಗಳ ಲೀಸಿಗೆ ಅನುಮತಿಕೊಟ್ಟಿತ್ತು. 1985ರಲ್ಲಿ ಆ ಜಾಗದಲ್ಲಿ ಒಂದು ಗಣೇಶ ದೇವಸ್ಥಾನ ಹಾಗೂ ಸಣ್ಣದೊಂದು ಕುಟೀರದೊಂದಿಗೆ ವೇದ, ಧ್ಯಾನಗಳ ತರಬೇತಿ ಆರಂಭಿಸಿ ಅಲ್ಲೇ ಭದ್ರ ಬುನಾದಿಯನ್ನು ಊರುವ ನಿರ್ಧಾರವನ್ನು ಮಾಡುತ್ತಾನೆ. ಮತ್ತೇ 1989-90ರ ದಶಕದಲ್ಲಿ ಬೆಂಗಳೂರು ದಕ್ಷಿಣ ತಾಲೂಕಿನ ತಹಸೀಲ್ದಾರ್ ದಿವಾಕರ್ ಸಹಾಯದಿಂದ ಊದಿಪಾಳ್ಯ, ಒಂಟಿಚೂಡ ಹಳ್ಳಿ, ಅಗರ ಪಂಚಾಯ್ತಿ, ಸಾಲಹುಣಸೆ, ಸಾಲದೊಡ್ಡಿಯ ಗ್ರಾಮಸ್ಥರಿಗೆ ಪುಡಿಗಾಸನ್ನು ಕೊಟ್ಟು ಅವರ ಜಮೀನನ್ನು ಕಬಳಿಸಿದ್ದೂ ಅಲ್ಲದೇ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರ ಮೇಲೆ ತನ್ನ ಭಕ್ತನ ಸಹಾಯದಿಂದ ಪೋಲೀಸರ ಮೂಲಕ ಹಲ್ಲೆಯನ್ನು ಮಾಡಿಸಿದ್ದನೆ೦ಬ ಆರೋಪ ಕೇಳಿಬರುತ್ತದೆ. 1994ರ ವೇಳೆಗೆ ಬೃಹತ್ತಾಗಿ ಬೆಳೆದ ರವಿಶಂಕರ್ ಸರ್ಕಾರ ನನಗೆ ಕೇವಲ 24 ಎಕರೆಗಳನ್ನು ಮಾತ್ರ ನೀಡಿದೆ, ಆದ್ದರಿಂದ ಬಿ.ಎಂ. ಕಾವಲ್ನ ಸರ್ವೇ ನಂ.134,135 ಮತ್ತು 180ರ ಹತ್ತೊಂಬತ್ತು ಎಕರೆ ಗೋಮಾಳವನ್ನು ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಅರ್ಜಿಹಾಕಿ ಅದರ ಪ್ರಸ್ತಾಪ ಆಗುವುದಕ್ಕೆ ಮುಂಚೆಯೇ ಜಾಗಕ್ಕೆ ಕಾಂಪೌಂಡ್ ಹಾಕಿ ಆಕ್ರಮಿಸಿಕೊಂದನೆಂದು ಕೆಲವು ಗ್ರಾಮಸ್ಥರು ಈಗಲೂ ದೂರುತ್ತಾರೆ. ಅಂದಿನಿಂದಲೇ ರವಿಶಂಕರ್ ಶ್ರೀಶ್ರೀಯ ಪದವಿಯನ್ನು ಪೋಣಿಸಿಕೊಂಡಿದ್ದು.

*ಆಶ್ರಮೋದ್ಯಮವೇ ಜೀವನಾಧಾರ:
ಬಹುಶಃ ನಾವು ಕಂಡಿರುವ ಹಾಗೇ ಸ್ವಾಮೀಜಿಗಳ ತಂದೆ-ತಾಯಿ ಬಂಧುಗಳು ಎಲ್ಲೋ ಅವರ ಪಾಡಿಗೆ ಅವರು ಸಾಧಾರಣವಾದ ಜೀವನವನ್ನು ಮಾಡುತ್ತಿರುತ್ತಾರೆ, ಆದರೆ, ಈ ರವಿಶಂಕರ್ ಗುರೂಜಿಯ ಕುಟುಂಬವಿಡೀ ಆಶ್ರಮೋತ್ಪತ್ತಿಯಲ್ಲಿ ತೊಡಗಿದೆ ಅದಕ್ಕೆ ಸಾಕ್ಷಿಯಂತೆ ನಿಂತಿರುವುದು ರವಿಶಂಕರ್ನ ತಂದೆ ರಾಮನಗರ ಜಿಲ್ಲೆಯ ಊರಗಳ್ಳಿಯಲ್ಲಿ ನಿರ್ಮಿಸಿರುವ ಆಶ್ರಮ ಹಾಗೂ ತಂಗಿ ಭಾನುಮತಿ ಬೆಂಗಳೂರಿನ ಜಯನಗರದ 5ನೇ ಬ್ಲಾಕ್ನಲ್ಲಿ ಮತ್ತೊಂದು ಆಶ್ರಮವನ್ನು ನಡೆಸುತ್ತಿದ್ದಾರೆ. ಈ ರವಿಶಂಕರ್ ಗುರೂಜಿ ಬೇರೆ ಬೇರೆ ಹೆಸರುಗಳಲ್ಲಿ ಅನೇಕ ಕಟ್ಟಡಗಳನ್ನು ನಿಮಾರ್ಣಮಾಡಿ ಈಗಾಗಲೇ ಲೈಫ್ ಸೆಟಲ್ ಮಾಡಿಕೊಂಡಿದ್ದಾರೆ. ಅಷ್ಟೇ ಸಾಲದೆಂದು ಅನೇಕರ ಸಹಕಾರದಿಂದ ಗ್ರಾಮಸ್ಥರ 150 ಎಕರೆ ಜಮೀನು ಈಗಾಗಲೇ ಸ್ವಾಹಾ ಆಗಿದೆ. ಇಂತಹ ಸ್ವಾಮೀಜಿ ಹೇಳಿಕೊಳ್ಳೋದು ನನಗೆ 140 ರಾಷ್ಟ್ರಗಳಲ್ಲಿ 300 ಮಿಲಿಯನ್ಗೂ ಹೆಚ್ಚಿನ ಭಕ್ತಾದಿಗಳಿದ್ದಾರೆಂದು, ಇದನ್ನು ನಂಬೋದಾದರೂ ಹೇಗೆ..? ಅದಕ್ಕೂ ಈ ಸ್ವಾಮೀಜಿ ಪಾರಿನ್ ಫಂಡ್ ಹೆಸರಿನಲ್ಲಿ ಹಣ ದೋಚುತ್ತಿರೋದು ಸಾಕ್ಷಿ. ಒಟ್ಟಿನಲ್ಲಿ ಇಂತಹ ಕಪಟ ನಾಟಕ ಪಾತ್ರಧರಿಗೆ ನಮ್ಮ ಹಿರಿಯ-ಕಿರಿಯ ರಾಜಕೀಯ ನಾಯಕರು ಬಗ್ಗಿ ಬಲೆಗೆ ಬೀಳುವುದು ವಿಪಯಾರ್ಸವಾಗಿದೆ.

*ಕೆಲವು ವಿವರಣೆ:
ಗಂಡಿನಿಂದ ಗಾಯವಾದ ವಿನಯ್ ವಾರದ ಹಿಂದೆಯಷ್ಟೇ ಭಕ್ತನಾಗಿದ್ದ, ಈತ ಒಬ್ಬ ಸಾಫ್ಟ್ವೇರ್ ಇಂಜಿನಿಯರ್, ಇವರು ಮೂಲತಃ ಬೆಳಗಾವಿಯವರು ಸದ್ಯಾ ಜೆ.ಪಿ.ನಗರದ ನಿವಾಸಿ. ಕೇಂದ್ರ ಗೃಹ ಸಚಿವರಾದ ಪಿ.ಚಿದಂಬರಂ ಹೇಳಿಕೆಯ ಪ್ರಕಾರ ಇಬ್ಬರು ಭಕ್ತರ ನಡುವಿನ ವಿವಾದ ಇದಕ್ಕೆ ಕಾರಣವೆಂಬುದು ಹಾಗೂ ಅನೇಕ ಪತ್ರಿಕೆಗಳಲ್ಲಿ ಗಾಳಿಸುದ್ಧಿಯಂತೆ ಹಬ್ಬಿದ ಇಬ್ಬರ ನಡುವಿನ ಭೂ ವಿವಾದಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂಬುದು ವಿನಯ್ನ ಹೇಳಿಕೆಯಿಂದ ಹಾಸ್ಯಾಸ್ಪದವಾಗಿ ಕಾಣುತ್ತದೆ. 'ನನ್ನ ತಂದೆ ನಿವೃತ್ತ ಸರ್ಕಾರಿ ಅಧಿಕಾರಿ ಅವರಿಗೆ ಯಾವುದೇ ಆಸ್ತೀ-ಪಾಸ್ತಿಯಿಲ್ಲಾ ಹಾಗೂ ನಾನಿರೋದು ಬಾಡಿಗೆ ಮನೆಯಲ್ಲಿ ಇನ್ನೂ ವಿವಾದ ಎಲ್ಲಿಂದ ಬರಬೇಕೂ..' ಹಾಗಾದರೆ, ಈ ದಾಳಿಗೆ ಕಾರಣವೇನು ಎಂದರೆ ನಮ್ಮ ಡಿ.ಜಿ.ಪಿ. ಡಾ.ಅಜಯ್ ಕುಮಾರ್ ಸಿಂಗ್, ಇದು ದಾಳಿಯೇ ಅಲ್ಲಾ ಕೇವಲ ಒಂದು ಘಟನೆ ಅಷ್ಟೇ ಎಂದು ಹೇಳುತ್ತಾರೆ.
ಶ್ರೀಶ್ರೀ.ರವಿಶಂಕರ್ ಇವೆಲ್ಲವನ್ನೂ ತಳ್ಳಿ ಹಾಕಿ 'ನಾನು ಬಿಹಾರ, ಕಾಶ್ಮೀರ, ಜಾರ್ಖಂಡ್ನಿಂದ ಹಿಂಸಾಚಾರವನ್ನು ತ್ಯಜಿಸಿ ಬಂದಿರುವ ಭಕ್ತಾದಿಗಳಿಗೆ ಸುದರ್ಶನ ಕ್ರಿಯೆ ಹಾಗೂ ಧ್ಯಾನದ ಮೂಲಕ ಆತ್ಮಜ್ಞಾನವನ್ನು ಪಡೆಯುವಲ್ಲಿಗೆ ಕರೆದೊಯ್ಯುತ್ತಿದ್ದೇನೆ. ಹಾಗೇ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶೌಚಾಲಯವನ್ನು ನಿರ್ಮಿಸಿದ್ದೇನೆ, ನೂರಾರು ಮಕ್ಕಳಿಗೆ ಉಚಿತ ಶಕ್ಷಣವನ್ನು ನೀಡುತ್ತಿದ್ದೇನೆ ಮತ್ತು ಅನೇಕ ಬುಡಕಟ್ಟು ಪ್ರದೇಶದಲ್ಲಿ 100ಕ್ಕೂ ಅಧಿಕ ಶಾಲೆಗಳಿವೆ ಇಂತಹ ದೇವ ಕಾರ್ಯವನ್ನು ಸಹಿಸದ ದುಷ್ಟ ಶಕ್ತಿಗಳು ಈ ದಾಳಿಯನ್ನು ಕೈಗೊಂಡಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕೇಂದ್ರ ಗುಪ್ತದಳ 'ನಕ್ಸಲ್ ಹಾಗೂ ಉಗ್ರರರ ಹಿಟ್ಲಿಸ್ಟ್ನಲ್ಲಿ' ಸ್ವಾಮೀಜಿಯ ಹೆಸರಿದೆ ಎಂಬ ಮಾಹಿತಿಯನ್ನು ರವಾನಿಸಿದ್ದಾರೆ.

*ಕಾಡೋ ಪ್ರಶ್ನೆಗಳು:
ಸ್ವಾಮೀಜಿ ಹೋದನಂತರ ನೋವಿನ ಅನುಭವವಾಯಿತೆಂಬುದು ವಿನಯ್ ಹೇಳಿಕೆ. ಆದರೆ, ಗುರೂಜಿ 'ನಾನು ಕಾರಿನ ಬಳಿ ಇದ್ದಾಗಲೇ ಒಂದು ಸ್ಫೋಟಕ ಸದ್ದು ಕೇಳಿದ್ದೆ' ಎಂದು ಹೇಳ್ತಾರೆ. ಆದರೆ, ಇದು ರವಿಶಂಕರ್ ಸ್ವಾಮೀಜಿಯ ಮೇಲೆಯೇ ನಡೆದ ದಾಳಿಯೇ ಆಗಿದ್ದರೇ..,
= ಯಾರಿಗೋ ಯಾಕೆ ಗುಂಡು ಹಾರಿಸಬೇಕಿತ್ತೂ ಮತ್ತು ಅಷ್ಟು ದೂರದಿಂದ ಹೊಡೆಯುವ ಅನಿವಾರ್ಯತೆ ಏನಿತ್ತು ಹಾಗೆ ನೋಡಿದರೆ .32ಮಿ.ಮಿ ರಿವಲ್ವಾರ್ನಲ್ಲಿ ಸಾಯಿಸಲು ಕನಿಷ್ಟ 50ಮೀಟರ್ ಹತ್ತಿರವಿರಬೇಕು. ಘಟನೆ ನಡೆದ 3 ಗಂಟೆ ತಳ್ಳಿದ್ಯಾಕೆ, ಆಶ್ರಮದಿಂದ ಠಾಣೆಗೆ ಸುಮಾರು 10-15 ಕಿ.ಮೀ. ದೂರಮಾತ್ರವಿದೆ. ಅಲ್ಲಿಗೇ ಹೋಗಿ ತಿಳಿಸಿದ್ದರೂ ಇಷ್ಟು ಸಮಯ ಬೇಕಿರಲಿಲ್ಲಾ.
= ಆಶ್ರನಮದ ಸುತ್ತಮುತ್ತಾ ಜಮೀನು ಕಳೆದುಕೊಂಡ ಗ್ರಾಮಸ್ಥರ ಕೆಲಸವಾ..? ಇಲ್ಲಾ, ಸುತ್ತುವರಿದಿರುವ ತೋಟದಲ್ಲಿ ಯಾರಾದರೂ ಬಂದೂಕಿನ ಅಭ್ಯಾಸವನ್ನು ನಡೆಸುತ್ತಿದ್ದಾರಾ..? ಅಥವಾ ಯಾರೋ ತಮಾಷೆಗೆಂದು ಹಾರಿಸಿದ ಗುಂಡು ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಯ್ತ.
= ಇನ್ನೊಂದು ದೃಷ್ಟಿಯಿಂದ ನೋಡಿದರೆ ಸರ್ಕಾರವನ್ನು ಉರುಳಿಸುವ ತಂತ್ರವೇನಾದರೂ ಇದರಲ್ಲಿ ಅಡಗಿದೆಯಾ...?
= ಶ್ರೀಶ್ರೀ.ರವಿಶಂಕರ್ ಗುರೂಜಿ ಘಟನೆಯನ್ನು ದಾಳಿಯನ್ನಾಗಿ ಪರಿವತರ್ಿಸಿ ಅಥವಾ ಅವರೇ ಪ್ರೀ ಪ್ಲಾನಡ್ ಆಗಿ ಶೂಟೌಟ್ ನಡೆಸಿ 'ಮೀಡಿಯಾ ಕಣ್ಣುಗಳಲ್ಲಿ' ಕುಣಿದಾಡಿ ಪಾರಿನ್ ಫಂಡ್ ಹೆಚ್ಚಿಸಿಕೊಳ್ಳುವ ಕಾರ್ಯದಲ್ಲಿ ತೊಡಗಿದ್ದಾರಾ..?
ಇಂತಹ ಎಷ್ಟೋ ಸಂಶಯಗಳ ಹುತ್ತಾ ಇನ್ನೂ ಆಳವಾಗಿದೆ. ಇದಕ್ಕೆಲ್ಲಾ ಉತ್ತರ ಸೂಕ್ತ ತನಿಖೆಯ ನಂತರವೇ ಸಿಗೋದು ಅನ್ನೋ ವಿಷಯ ಸಾಮಾನ್ಯವಾದದ್ದೇ ಆದರೆ, ಆಶ್ರಮಕ್ಕೆ ಅಲ್ಲೀವರೆಗೂ ಅಥವಾ ಬಹುಶಃ ಮುಂದೆಯೂ 80 ಪೋಲೀಸರ ಸರ್ಪಗಾವಲು ಆಶ್ರಮಕ್ಕೆ ದೊರೆಯುತ್ತದೆ ಮತ್ತು ಈಗಾಗಲೇ ಸ್ವಾಮೀಜಿಗೆ 24 ಗಂಟೆಗಳ ನಾಲ್ಕು ಜನ ಪೋಲೀಸರ 'ವೈ' ಶ್ರೇಣಿಯ ಭದ್ರತೆ ಒದಗಿಸಲಾಗಿದೆ.
ಈ ಎಲ್ಲಾ ಸಂಗತಿಗಳ ಮೇಲೆ ಒಂದು ನೋಟಬೀರಿದರೆ, ನಮ್ಮ ಭಾರತೀಯ ಸಂಸ್ಕೃತಿಯು, ಭವ್ಯ ಪರಂಪರೆಯು ಕೇವಲ ಇತಿಹಾಸದ ಪುಟಗಳಲ್ಲಿ ದೂಳು ಹಿಡಿಯುತ್ತಾ ಸಾಗಿದೆ ಎಂಬುದು ಸ್ಪಷ್ಟವಾಗುತ್ತದೆ.




Saturday, June 5, 2010


ಬಿಡದಿಯ ಏಕಶಿಲಾ ಮೂರ್ತಿ ಗುಜರಾತಿಗೆ..:
ಅಹಿಂಸೆ ಮತ್ತು ತ್ಯಾಗದ ಸಾಕಾರ ಮೂರ್ತಿಯೆಂದೆ ಪ್ರಸಿದ್ದಿ ಪಡೆದಿರುವ ಕರ್ನಾಟಕದ ಶ್ರವಣಬೆಳಗೊಳದ ಬೃಹತ್ ಬಾಹುಬಲಿಯ 'ತದ್ರೂಪಿ' ಬಿಡದಿಯ ಬಳಿ ಸದ್ಧಿಲ್ಲದೇ ಮೂಡಿದೆ. ಬೆಟ್ಟದ ತುದಿಯಲ್ಲಿ ಶಾಂತವಾಗಿ ನಿಂತಿರುವ ನಿರ್ವಿಕಾರ ಮೂರ್ತಿ ಬಾಹುಬಲಿ ಇನ್ನು ಏಕಾಂಗಿಯಲ್ಲ. ಜಗತ್ತಿನ ಅತ್ಯಂತ ಎತ್ತರದ ಏಕಶಿಲಾ ಮೂರ್ತಿ ಎಂಬ ಖ್ಯಾತಿ ಪಡೆದಿದ್ದ ಈ ಮೂರ್ತಿಗಿಂತ ಅತ್ಯಲ್ಪ ಕಡಿಮೆ ಎತ್ತರದಲ್ಲಿ ಮತ್ತೊಬ್ಬ ಬಾಹುಬಲಿ ಈಗ ಸಿದ್ಧನಾಗಿದ್ದಾನೆ. ಅವನೇ ಗುಜರಾತಿನ ಸೋನಾಘಡದಲ್ಲಿ ಕೆಲವೇ ದಿನಗಳಲ್ಲಿ ಪ್ರತಿಷ್ಠಾಪನೆಯಾಗಲಿರುವ 41 ಅಡಿ ಎತ್ತರದ ಬಾಹುಬಲಿ. ಅಷ್ಟು ಎತ್ತರದ ಈ ಬಾಹುಬಲಿಯ ಹಿನ್ನೆಲೆ ಏನು?
ಕ್ರಿ.ಶ.981ರಲ್ಲಿ ಚಾವುಂಡರಾಯನಿಂದ ನಿರ್ಮಿಸಲ್ಪಟ್ಟ ಬಾಹುಬಲಿ ಮೂರ್ತಿ 59 ಅಡಿ ಎತ್ತರವಿದ್ದು ಮೊದಲನೇ ಸ್ಥಾನದಲ್ಲಿದ್ದರೆ, ಬೆಂಗಳೂರಿನಿಂದ 32 ಕಿ.ಮೀ. ದೂರದಲ್ಲಿರುವ ಬಿಡದಿಯ ದಾಸಪ್ಪನ ದೊಡ್ಡಿಯ "ಶಿಲ್ಪಲೋಕ"ದಲ್ಲಿ ಅರಳಿರುವ ಕೆತ್ತನೆಯು 41 ಅಡಿಯಿದ್ದು ಮೂರನೇ ಸ್ಥಾನದಲ್ಲಿ ನಿಲ್ಲುತ್ತದೆ. 42 ಅಡಿಯಿರುವ ಕಾರ್ಕಳದ ಗೊಮ್ಮಟೇಶ್ವರ ಸೇರಿದಂತೆ ಇನ್ನೂ ಮೂರುಕಡೆ ಎತ್ತರದ ಏಕಶಿಲಾ ಬಾಹುಬಲಿಯ ಮೂರ್ತಿಯು ಕರ್ನಾಟಕದಲ್ಲಿ ಪ್ರತಿಷ್ಠಾಪನೆಗೊಂಡಿದೆ.
ಜೈನ ಧರ್ಮದ ದಿಗಂಬರ ಸನ್ಯಾಸಿ ಪೂಜ್ಯ ಕಾನಜಿ ಸ್ವಾಮೀಜಿಯವರು ಸುಮಾರು 45 ವರ್ಷಗಳ ಕಾಲ ಧರ್ಮ ಪ್ರಚಾರ ಮಾಡಿದ ಗುಜರಾತಿನ ಭಾವಾನಗರ ಜಿಲ್ಲೆಯ, ಸಿಹೋರ್ ತಾಲ್ಲೂಕಿನಲ್ಲಿರುವ ಸೋನಾಗಡದಲ್ಲಿ ಈ ಬಾಹುಬಲಿಯು ಪ್ರತಿಷ್ಠಾಪನೆಗೊಳ್ಳಲಿದೆ. 1992ರಲ್ಲಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾರವರಿಂದ 'ರಾಷ್ಟ್ರೀಯ ಶಿಲ್ಪಕಲಾ ಪ್ರಶಸ್ತಿ' ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ಪಡೆದಿರುವ ಶಿಲ್ಪಿ 'ಅಶೋಕ್ ಗುಡಿಗಾರ್'ರವರು ಸುಮಾರು ಮೂರು ತಿಂಗಳ ಕಾಲ ಶ್ರವಣಬೆಳಗೊಳದಲ್ಲಿ ಬೀಡುಬಿಟ್ಟು ಗೊಮ್ಮಟ್ಟೇಶ್ವರನ ಅಂಗಾಂಗಗಳ ಅಧ್ಯಯನ ನಡಸಿ, 10 ಜನರ ತಂಡದೊಂದಿಗೆ ಕೆತ್ತನೆಯನ್ನು ಆರಂಭಿಸಿ 15 ತಿಂಗಳ ಸತತ ಪರಿಶ್ರಮದಿಂದ ಸುಂದರ ಶಿಲ್ಪವನ್ನು ನಿರ್ಮಿಸಿದ್ದಾರೆ.
ಗುಜರಾತಿನ ದಿಗಂಬರ ಜೈನ ಸಮುದಾಯದವರು ಇಡೀ ಭಾರತವನ್ನು ಸುತ್ತಿ ಕೊನೆಯಲ್ಲಿ ಬಿಡದಿಯ ಪ್ರತಿಭಾವಂತನಿಗೆ ಈ ಕೆಲಸದ ಗುತ್ತಿಗೆ ನೀಡಿದ ಬಳಿಕ, ಅಶೋಕ್ರವರು ಉತ್ತಮ ಗುಣಮಟ್ಟದ ಕಲ್ಲಿಗಾಗಿ ನಾನಾ ಕಡೆ ಹುಡುಕಾಟ ನಡೆಸಿ ದೇವನಹಳ್ಳಿಯ ಕ್ವಾರಿ ಪ್ರದೇಶದಿಂದ ಸುಮಾರು 400 ಟನ್ ತೂಕದ ಗ್ರಾನೈಟ್ ಕಲ್ಲನ್ನು ತೆಗಿಸಿ, 36.5 ಅಡಿಯ ಬಾಹುಬಲಿಯು 4.5 ಅಡಿಯ ಪೀಠದ ಮೇಲೆ ನಿಂತಿರುವ ಹಾಗೆ ಕೆತ್ತಿ ತಮ್ಮ ಚಾಕಚಕ್ಯತೆಯನ್ನು ತೋರಿದ್ದಾರೆ. ಇದರ ಅಗಲ 14 ಅಡಿ ಮತ್ತು 7 ಅಡಿ ದಪ್ಪವಿದ್ದು ಸುಮಾರು 200 ಟನ್ಗಳಷ್ಟು ತೂಗುತ್ತದೆ.
ಸುಮಾರು 112 ಚಕ್ರಗಳುಳ್ಳ 'ಹೈಡ್ರೋಲಿಕ್' ತಂತ್ರಜ್ಞಾನವಿರುವ ಟ್ರಕ್ನ ಮೇಲೆ ಮೂತರ್ಿಯನ್ನು ಬಹಳಾ ಜಾಗರೂಕತೆಯಿಂದ ಏರಿಸಿದ್ದು, ಇದನ್ನು 10 ಚಕ್ರಗಳ ವೋಲ್ವೋ ಲಾರಿಯು ಎಳೆದೊಯ್ಯುತ್ತಲಿದೆ. ಇದೇ ಭಾನುವಾರ ಬಿಡದಿಯಿಂದ ಪ್ರಯಾಣವನ್ನು ಆರಂಭಿಸಿದ್ದು ಸುಮಾರು 30 ದಿನಗಳಲ್ಲಿ ಗುಜರಾತನ್ನು ಸೇರುವ ನಿರೀಕ್ಷೆಯಿದೆ. ತದನಂತರದಲ್ಲಿ ಬಾಹುಬಲಿ ಮೂರ್ತಿಯ ಹಿಂಭಾಗದ ಕೆಲಸವನ್ನು ಅಲ್ಲೇ ಪೂರ್ಣಗೊಳಿಸಿ ಪ್ರತಿಷ್ಠಾಪಿಸಲಾಗುವುದು. ಅದಕ್ಕಾಗಿಯೇ ಸೋನಾಗಡದಲ್ಲಿ 60 ಅಡಿಯ ಗುಡ್ಡದ ಮೇಲೆ 40 ಅಡಿಯ ಪೀಠವು ನಿರ್ಮಾಣಗೊಂಡಿದ್ದು, ಇದರ ಮೇಲೆ ಬಾಹುಬಲಿಯನ್ನು ಪ್ರತಿಷ್ಠಾಪಿಸಬೇಕೆಂದು ಜೈನ ಸಮುದಾಯವು ತಕ್ಕ ಸಿದ್ಧತೆ ನಡೆಸಿದೆ.
ಈ ಮೂರ್ತಿಯ ಕೆತ್ತನೆಗೆ ಅಗತ್ಯವಿದ್ದ ಕಲ್ಲು, ಕೆತ್ತನೆಯ ಕೆಲಸ ಹಾಗೂ ಸಾಗಣೆಯ ವೆಚ್ಚ ಎಲ್ಲವೂ ಸೇರಿದರೆ ಅಂದಾಜು ಒಂದು ಕೋಟಿ ರೂಪಾಯಿಯಷ್ಟಾಗುತ್ತದೆ. ಇದರಲ್ಲಿ ಸಾರಿಗೆಗೇ ಸುಮಾರು 50 ಲಕ್ಷದವರೆಗೆ ಖರ್ಚಾಗಿದೆ. ಇಂತಹ ಅಪರೂಪದ ಬೃಹತ್ ಏಕಶಿಲಾ ಮೂರ್ತಿಯನ್ನು ನಿರ್ಮಿಸಿದ ಅಶೋಕ್ ಗುಡಿಗಾರ್ ಮೂಲತಃ ಶಿವಮೊಗ್ಗದ ಸಾಗರದವರು, ಇವರ ಕಲೆಗೆ ಈಗಾಗಲೇ ಸಾಕ್ಷಿಯಾಗಿ ನಿಂತಿರುವುದು "ಹರಿದ್ವಾರದಲ್ಲಿರುವ 38 ಅಡಿಯ ಹನುಮ, ಕುಕ್ಕೆ ಸುಬ್ರಹ್ಮಣ್ಯದ 21 ಅಡಿಯ ವಿನಾಯಕ ಹಾಗೂ ನಟ 'ಅರ್ಜುನ್ ಸರ್ಜಾರ' ಅವರು ಚೆನೈನಲ್ಲಿ ಸ್ಥಾಪಿಸಿರುವ 28 ಅಡಿ ಎತ್ತರದ ಹನುಮಂತ". ಒಟ್ಟಿನಲ್ಲಿ ಇಂತಹ ಅದ್ಭುತ ಕಲಾವಿದ ಕನ್ನಡಿಗನೆಂಬುದು ನಮ್ಮೆಲ್ಲರ ಹೆಮ್ಮೆ .

;;