Saturday, July 17, 2010




ವಿದ್ಯಾರ್ಥಿ
ಉಪಗ್ರಹ "ಸ್ಟುಡ್ ಸ್ಯಾಟ್"

ಮೂರೂ, ಎರಡೂ, ಒಂದೂ...., ಅಬ್ಬಾ! ಉಸಿರುಗಟ್ಟುವ ಕ್ಷಣವದು, ಕಣ್ಣು ಮಿಟಿಕಿಸುವುದರಲ್ಲಿ ಬುಸ್ ಎಂದು ಹಾರಲು ಸಿದ್ಧವಾಗಿ ನಿಂತಿದ್ದ ಪಿ.ಎಸ್.ಎಲ್.ವಿ-ಸಿ15 ಹೆಸರಿನ ಗಗನ ನೌಕೆ. ತನ್ನ ಒಡಲಲ್ಲಿ ಐದು ಉಪಗ್ರಹಗಳನ್ನು ಪೋಣಿಸಿಕೊಂಡು ಭೂಮಿಯಿಂದ ಮೇಲಕ್ಕೆ ಹಾರಿ 637ಕಿ.ಮೀ. ದೂರದಲ್ಲಿ ಒಂದಾದಮೇಲೊಂದರಂ
ತೆ ತಕ್ಕ ಕಕ್ಷೆಗೆ ಉಪಗ್ರಹಗಳನ್ನು ಸುರಕ್ಷಿತವಾಗಿ ಸೇರಿಸಿತು, ಅದೂ ಕೇವಲ 17.4 ನಿಮಿಷಗಳಲ್ಲಿ. ಭಾರತದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳು ನಿರ್ಮಿಸಿದ ಉಪಗ್ರಹವು ಕಕ್ಷೆಸೇರಿದೆ. ಸುಮಾರು
35 ವಿದ್ಯಾಥರ್ಿಗಳ ತಂಡ ಇಸ್ರೋ ವಿಜ್ಞಾನಿಗಳ ಸಹಕಾರದೊಂದಿಗೆ ಸತತ ಒಂದೂವರೆ ವರ್ಷಗಳ ಶ್ರಮದ ಫಲವಾಗಿ "ಸ್ಟುಡ್ ಸ್ಯಾಟ್"ನಿರ್ಮಾಣವಾಗಿತ್ತು. ಕ್ರಯೋಜನಿಕ್ ಎಂಜಿನ್
ಮೊದಲ ಬಾರಿಗೆ ಬಳಸಿದ್ದ ಜಿ.ಎಸ್.ಎಲ್.ವಿ-ಡಿ3 ಏಪ್ರಿಲ್ನಲ್ಲಿ ಉಡಾವಣೆಗೊಂಡ ಕೆಲಕ್ಷಣದಲ್ಲೇ ಬಂಗಾಳಕೊಲ್ಲಿಯನ್ನು ಸೇರಿತ್ತು. ವಿಜ್ಞಾನಿಗಳು ಸೋಲಿನಿಂದ ಹಿಂಜರಿಯದೆ ಮೂರೇ ತಿಂಗಳಲ್ಲಿ ಕಠಿಣ ಶ್ರಮವಹಿಸಿ ಈ ಬಾರಿ ಯಶಸ್ಸನ್ನು ತಮ್ಮದಾಗಿಸಿಕೊಂಡು ಬೇಸರವನ್ನು ದೂರವಾಗಿಸಿದ್ದಾರೆ.
230ಟನ್ ತೂಕ, 44.4ಮೀ ಎತ್ತರವಿರುವರ ಈ
ಗಗನ ನೌಕೆ, ನಾಲ್ಕು ಹಂತಗಳನ್ನು ಒಳಗೊಂಡಿದೆ. ಇದರ ತಯಾರಿಗೆ ಸುಮಾರು 260 ಕೋಟಿಯಷ್ಟು ಖಚರ್ಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ನೆಲೆಯಿಂದ ಸೋಮವಾರ ಉಡಾವಣೆಗೊಂಡ ಪಿ.ಸ್.ಎಲ್.ವಿಯಲಿದ್ದ ಐದು ಉಪಗ್ರಹಗಳು:
*ದೂರ ಸಂವೇದಿ ಉಪಗ್ರಹ ಕಾಟರ್ೊಸ್ಯಾಟ್-2ಬಿ(690ಕಿ.ಲೊ)
*ಸ್ಟುಡ್ ಸ್ಯಾಟ್(850ಗ್ರಾಂ)
*ಅಲ್ಜೇರಿಯಾದ ಅಲ್ಸ್ಯಾಟ್(116ಕಿ.ಲೊ)
*ಕೆನಡಾ ಮತ್ತು ಸ್ವಿಡ್ಜರ್ಲ್ಯಾಂಡ್ ನ್ಯಾನೊ ಉಪಗ್ರಹಗಳು(6ಕಿ.ಲೊ,1ಕಿ.ಲೊ)
*ಒಷನ್ ಸ್ಯಾಟ್-2
1994ರಿಂದ2009ರವರೆಗೆ 22ವಿದೇಶಿ ಉಪಗ್ರಹಗಳು, 17 ಭಾರತೀಯ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗಿದ್ದು, 2013ರ ವೇಳೆಗೆ ಮಾನವರಹಿತ ಚಂದ್ರಯಾನಕ್ಕೆ ಇಸ್ರೋ ಸಿದ್ಧತೆ ನಡೆಸಿದೆ. ಕಾಟರ್ೊಸ್ಯಾಟ್-2ಬಿ ಇಸ್ರೋದ
ಅತ್ಯಂತ ದೂರ ಸಂವೇದಿ ಉಪಗ್ರಹವಾಗಿದ್ದು, ಎಲ್ಲಾ ಬಣ್ಣಗಳಿಗೂ ಪ್ರತಿಕ್ರಿಯೆ ತೋರುವ ಕ್ಯಾಮರಾವನ್ನು ಅಳವಡಿಸಲಾಗಿದೆ. 0.8ಮೀ ಅಂತರಿಕ್ಷೀಯ ಸ್ಪಷ್ಟತೆ ಹಾಗೂ 9.6ಕಿ.ಮೀ ದೂರದ ಗೋಚರತೆ ಸಾಮಥ್ರ್ಯ ದೇಶದ ಗ್ರಾಮೀಣ ಭಾಗಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ.
ಈ ಉಡಾವಣೆಯಲ್ಲಿನ ಸ್ವಾರಸ್ಯಕರ ಸಂಗತಿ, "ಇಂಟರ್ನ್ಯಾಶನಲ್ ಆಸ್ಟ್ರೋನಾಟಿಕಲ್ ಸೆಮಿನಾರ್"ನಿಂದ ಸ್ಫೂರ್ತಿ ಪಡೆದ ನಮ್ಮ ಕನರ್ಾಟಕ ಹಾಗೂ ಆಂಧ್ರಪ್ರದೇಶದ ಯುವ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಪಿಕೊ(ಅತಿ ಸಣ್ಣ) ಉಪಗ್ರಹವನ್ನು ತಯಾರಿಸಿ ದಾಖಲೆಯನ್ನು ನಿರ್ಮಿಸಿದ್ದಾರೆ. ಒಂದು ಕೆ.ಜಿ.ಗಿಂತಲೂ ಕಡಿಮೆ ತೂಕ ಹಾಗೂ 10ಸೆಂ.ಮೀ.*10ಸೆಂ.ಮೀ*13.5ಸೆಂ.ಮೀ ಅಳತೆಯೊಂದಿಗೆ ಹಗುರವಾಗಿದ್ದರೂ, 90ಮೀ ರೆಸಲ್ಯೂಶನ್ ಸಾಮಥ್ರ್ಯದ ಕ್ಯಾಮರಾವನ್ನು ಬಳಸಿದ್ದು ಹವಾಮಾನ ಹಾಗು ಬೆಳೆಗೆ ಸಂಬಂಧಿಸಿದ ಅಧ್ಯಯನವನ್ನು ನಡೆಸಲು ಸಹಕಾರಿಯಾಗಲಿದೆ. ಉಪಗ್ರಹ ಉಡಾವಣೆಗೊಳ್ಳುತ್ತಿದ್ದಂತೆ ವಿಜ್ಞಾನಿಗಳು ಸಂಭ್ರಮಿಸಿದರಾದರೂ, ವಿದ್ಯಾರ್ಥಿಗಳಲ್ಲಿ ಆತಂಕದ ಛಾಯೆ ಮಡುಗಟ್ಟಿತ್ತು, ಸುಮಾರು ಒಂದೂವರೆ ಗಂಟೆಯ ನಂತರ ಬೆಂಗಳೂರಿನ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಅಳವಡಿಸಿದ್ದ ರಿಸೀವರಗಳ ಮೂಲಕ ಸಿಗ್ನಲ್ ಹಾದು ಬೀಪ್ ಶಬ್ದದೊಂದಿಗೆ ಕಂಪ್ಯೂಟರ್ ಪರದೆಯ ಮೇಲೆ ಚಿತ್ರ ಮೂಡುತ್ತಿದ್ದಂತೆ ಯುವ ವಿಜ್ಞಾನಿಗಳ ಕಣ್ಣಿನಲ್ಲಿ ಹೊಳಪು ಮೂಡಿ ಹಬ್ಬದ ಸಂಭ್ರಮ ಮನೆಮಾಡಿತು. ಎನ್.ಎಂ.ಐ.ಟಿ, ಆರ್.ವಿ.ಸಿ.ಇ, ಎಂ.ಎಸ್.ಆರ್.ಸಿ, ಎಂ.ಎನ್.ಎಸ್ ಹಾಗೂ ಬಿ.ಎಂ.ಎಸ್ ಕಾಲೇಜುಗಳು ಸೇರಿ ಒಟ್ಟು 55ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಉಪಗ್ರಹವನ್ನು ತಯಾರಿಸಲಾಗಿದ್ದು, ರಿಸೀವರ್ಗಳಿಗೆ ನಿಟ್ಟೆ ಸಂಸ್ಥೆ 45ಲಕ್ಷ ಖಚರ್ು ಮಾಡಿದೆ.
ಭಾನುವಾರ ರಾತ್ರಿಯಿಡೀ ವಿಶ್ವಕಪ್ ಪುಟ್ಬಾಲ್ನ ಫೈನಲ್ ಪಂದ್ಯದ ವೀಕ್ಷಣೆಯ ಗುಂಗಿನಲ್ಲಿದ್ದ ಜನರು ಒಂದು ಕಡೆಯಾದರೆ, ತಮ್ಮ ಕನಸನ್ನು ಸಾಕಾರಗೊಳ್ಳುವ ಕೊನೆಯ ಹಂತದಲ್ಲಿದ್ದ 35 ವಿದ್ಯಾರ್ಥಿಗಳು ಮೂರು ತಂಡಗಳಾಗಿ ಮಾರ್ಪಟ್ಟು, ಒಂದು ಗುಂಪು ಶ್ರೀಹರಿಕೋಟಾದಲ್ಲಿ, ಮತ್ತೆರಡು ಗುಂಪು ಬೆಂಗಳೂರಿನ ಪೀಣ್ಯದಲ್ಲಿರುವ "ಇಸ್ಟ್ರಾಟ್" ಹಾಗೂ ಯಲಹಂಕದ "ನಾಸ್ಟ್ರಾಕ್" ಕೇಂದ್ರಗಳಲ್ಲಿ ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಕಾರ್ಯನಿರ್ವಹಿಸಿ ಕೊನೆಗೂ ಸಾಧನೆಯ ಶಿಖರವನ್ನೆ ಏರಿದ್ದಾರೆ. ಯುವಕರ ಆಸಕ್ತಿ ಅದ್ಭುತ ಅನುಭವವನ್ನೇ ನೀಡಿದೆ, ಇಸ್ರೋ ವಿಜ್ಞಾನಿಗಳ ಮಾರ್ಗದರ್ಶನ ಭಾರತೀಯ ವಿದ್ಯಾರ್ಥಿಗಳ ಪಾಲಿಗೆ ವರವೇ ಸರಿ. ಈ ಎಲ್ಲಾ ಪರಿಣತಿಯನ್ನು ಪಡೆದ-ಪಡೆಯುವ ವಿದ್ಯಾರ್ಥಿ ಸಮೂಹ ವಿದೇಶದ ಕಲ್ಪನಾವಿಲಾಸಕ್ಕೆ ಮಾರು ಹೋಗದೆ ದೇಶದ ಪ್ರಗತಿದೆ ದುಡಿಯುವ ಪಣ ತೊಟ್ಟರೆ ಇನ್ನು ಹತ್ತೇ ವರ್ಷಗಳಲ್ಲಿ ಭಾರತ ದೇಶವು ಇಡೀ ಪ್ರಪಂಚವೆ ಬೆರಗಿನಿಂದ ನೋಡುವಂತೆ ಮಾಡಬಹುದು

Monday, July 12, 2010


"ಸೆಮಿಫೈನಲ್ ಶಾಸ್ತ್ರ...ಆಕ್ಟೋಪಸ್ ಅವಾಂತರ"

ಗಿಳಿ ಶಾಸ್ತ್ರ, ಹಾಲುವಕ್ಕಿ ಶಕುನ ಕೇಳೀ ಕೇಳೀ..ಬೇಜಾರಾಗಿದ್ದರೆ, ಸಮುದ್ರದ ತಳಭಾಗದಲ್ಲಿ ವಾಸಿಸೋ ಎಲುಬಿಲ್ಲದ "ಆಕ್ಟೋಪಸ್" ಹತ್ತಿರ ಒಮ್ಮೆ ಪ್ರಯತ್ನಿಸಬಹುದು. ಆದರೆ, ಇದಕ್ಕಾಗಿ ನೀವು ಜರ್ಮನಿವರೆಗೆ ಹೋಗಬೇಕು ಅಷ್ಟೆ. ಹಾ...! ಜರ್ಮನಿಯ ಮ್ಯೂಸಿಯಂ ಒಂದರಲ್ಲಿ ಬಂಧಿಯಾಗಿರುವ ಅಕ್ಟೋಪಸ್ "ಪಾಲ್", ವಿಶ್ವಕಪ್ ಪುಟ್ಬಾಲ್ ಸಮರದ ಎರಡನೇ ಸೆಮಿಫೈನಲ್ ವರೆಗೆ ಜರ್ಮನ್ ತಂಡದ ಅಭಿಮಾನಿಗಳ ಪಾಲಿಗೆ ಸಾಕ್ಷಾತ್ ದೇವ ಸ್ವರೂಪಿಯಾಗಿದ್ದ. ಈಗ ಅದೇ ಜನರ ಡಿನ್ನರ್ಗೆ ಸೂಪಾಗೋ ಸ್ಥಿತಿಗೆ ತಲುಪಿದೆ.

ಭವಿಷ್ಯವಾಣಿ:
ಇಂಗ್ಲೇಂಡ್ನಲ್ಲಿ ಹುಟ್ಟಿದ ಪಾಲ್, ಜರ್ಮನಿಯ ಪಾಲಾದ ಬಳಿಕ ತನ್ನ ಭವಿಷ್ಯವಾಣಿಯನ್ನು 2008ರಿಂದ ಪ್ರಾರಂಭಿಸಿದ. ಅಂದರೆ ಇದು ಮಾತನಾಡುವ ಆಕ್ಟೋಪಸ್ ಖಂಡಿತ ಅಲ್ಲ. ಆಹಾರವನ್ನು ಇಡಲಾಗಿರುವ ಎರಡು ಗಾಜಿನ ಡಬ್ಬಿಗಳಿಗೆ ಎರಡು ರಾಷ್ಟ್ರಗಳ ರಾಷ್ಟ್ರ ಧ್ವಜವನ್ನು ಅಂಟಿಸಲಾಗಿರುತ್ತದೆ, ಅಕ್ಟೋಪಸ್ ಯಾವ ಡಬ್ಬಿಯ ಆಹಾರವನ್ನು ಮೊದಲು ಸೇವಿಸುತ್ತದೊ ಆ ದೇಶದ ಪುಟ್ಬಾಲ್ ತಂಡ ಪಂದ್ಯದಲ್ಲಿ ಜಯಭೇರಿ ಬಾರಿಸುತ್ತದೆಂಬ ನಂಬಿಕೆ ಜರ್ಮನ್ ಜನರಲ್ಲಿ ಆಳವಾಗಿ ಬೇರೂರಿದೆ. ಇದುವರೆಗಿನ ಪಾಲ್ನ ಸೆಲೆಕ್ಟಿಂಗ್ ಭವಿಷ್ಯ ಒಮ್ಮೆ ಮಾತ್ರ ಸುಳ್ಳಾಗಿದೆ, ಅಂದು "ಯೂರೋಕಪ್"ನ ಪಂದ್ಯದಲ್ಲಿ ಜರ್ಮನಿ ಗೆಲುವನ್ನು ಸಾಧಿಸುತ್ತದೆಂಬ ನಂಬಿಕೆ ಸ್ಪೇನ್ನಿಂದ ಮುರಿದುಬಿದ್ದಿತ್ತು. ಜರ್ಮನ್ ವಿಶ್ವಕಪ್ನಲ್ಲಿ ಆಡಿದ ಐದು ಪಂದ್ಯಗಳ ಫಲಿತಾಂಶ ಆಕ್ಟೋಪಸ್ ಸೂಚಿಸಿದಂತೆ ಆಷ್ಟ್ರೇಲಿಯ, ಗಾನಾ, ಅಜರ್ೆಂಟೀನಾ, ಇಂಗ್ಲೆಂಡ್ ತಂಡಗಳನ್ನು ಮಣಿಸಿ ಮುನ್ನುಗಿದ್ದು "ಪಾಲ್"ನನ್ನು ವಿಶ್ವವಿಖ್ಯಾತನನ್ನಾಗಿ ಮಾಡಿಬಿಟ್ಟಿತು. ಇದೇ ಪ್ರಸಿದ್ಧಿ ಮಾರಕವಾಗಿ ಪರಿಣಮಿಸಿದ್ದು, ಜರ್ಮನಿ ಮತ್ತು ಸ್ಪೇನ್ ನಡುವಿನ ಅಂತಿಮ ಹಂತದ ಹೋರಾಟದ ಬಗ್ಗೆ ಪಾಲ್ ನೀಡಿದ ಸೂಚನೆಯಿಂದ, ಅದೇನೆಂದರೆ ಜರ್ಮನಿ ಈ ಪಂದ್ಯದಲ್ಲಿ ಮಣ್ಣುಮುಕ್ಕುತ್ತದೆಂಬ ಭವಿಷ್ಯ. ಸೆಮಿಫೈನಲ್ನಲ್ಲಿ ಸ್ಪೇನ್ ಗೆಲುವಿನ ಮೂಲಕ ಈ ಭವಿಷ್ಯ ನಿಜವಾಗಿದೆ.

ಅಡುಗೆಗೆ ಆಕ್ಟೋಪಸ್:
ಪಾಲ್ನ ಭವಿಷ್ಯದಿಂದ ದಿಗ್ಭ್ರಾಂತರಾದ ಜರ್ಮನರು, ಇದೇನಾದರು ನಿಜವೇ ಆದರೆ ಈ ಆಕ್ಟೋಪಸ್ನನ್ನು ಮ್ಯೂಸಿಯಂನಿಂದ ಹೋಟೆಲ್ಗೆ ಮಾರಾಟ ಮಾಡಲಾಗುತ್ತದೆ ಹಾಗೂ ಹೋಟೆಲ್ನ ಸಿಬ್ಬಂದಿ ಆಕ್ಟೋಪಸ್ನ್ನು ಕತ್ತರಿಸಿ ಸುವಾಸನಾಭರಿತ "ಸೂಪ್" ತಯಾರಿಸಿ ಗ್ರಾಹಕರಿಗೆ ಉಣಬಡಿಸಲಿದ್ದಾರೆ ಎಂಬ ಕಠೋರ ನಿಲುವುಗಳನ್ನು ಕೈಗೊಂಡಿದ್ದರು. ಈಗ ಜರ್ಮನಿ ಸೋಲನ್ನು ಕಂಡಿದೆ, ಮುಂದೆ ಆಕ್ಟೋಪಸ್ ಜೀವ ಅಡುಗೆಯಲ್ಲಿ ಅಂತಿಮವಾಗುತ್ತಾ....?

ಮಾತು ಬಾರದ, ಸನ್ನೆ ತಿಳಿಯದ, ಎಲುಬಿಲ್ಲದ ಪ್ರಾಣಿಗಳಲ್ಲೇ ಅತಿ ಬುದ್ಧಿವಂತ ಪ್ರಾಣಿಯೆಂದು ಕರೆಸಿ ಕೊಳ್ಳುವ ಆಕ್ಟೋಪಸ್ ಮೂಲತಃ ತ್ಯಾಗ ಜೀವಿ. ಇವು ತನ್ನ ಮರಿಗಳ ರಕ್ಷಣೆಗಾಗಿ ಸುಮಾರು ಆರು ತಿಂಗಳ ಕಾಲ ಸತತ ಹೋರಾಟವನ್ನು ನಡೆಸಿ ಪ್ರಾಣತ್ಯಾಗ ಮಾಡುತ್ತದೆ, ಆಕ್ಟೋಪಸ್ ಸತ್ತ ನಂತರವೂ ಅನೇಕ ಜಲಚರಗಳಿಗೆ ಆಹಾರವಾಗಿ ಸಾಕಾರಗೊಳ್ಳುತ್ತದೆ. ಇಂತಹ ಅದ್ಭುತ ಜೀವಿಯನ್ನು ಗಾಜಿನ ಗೋಡೆಗಳ ಮಧ್ಯೆ ಬಂಧಿಸಿರುವುದು ಸಾಲದೆ ಮನುಷ್ಯ ತನ್ನ ಮೂರ್ಖ-ಮೂಢ ಸ್ವಭಾವದಿಂದ ಅಪರೂಪದ ಜೀವಿಯನ್ನು ಬಲಿಕೊಡಲು ಹೊರಟಿರೋದು ಎಷ್ಟು ಸರಿ...?
ಇತರೆ ಪ್ರಾಣಿಗಳು ಮಾನವನ ಕಾಲು ನೆಕ್ಕಬೇಕು, ತನ್ನ ಮನಸ್ಸಿಗೆ ಸಂತೋಷ ನೀಡುವಂತೆ ನಡೆದುಕೊಳ್ಳುವುದೇ ಅವುಗಳ ಆದ್ಯ ಕರ್ತವ್ಯ ಎಂಬ ಸ್ವಾರ್ಥ ಮನೋಭಾವ, ಕ್ರೀಡೆಯಲ್ಲಿ ಸೋಲು-ಗೆಲುವುಗಳು ಕಣದಲ್ಲಿರುವ ಆಟಗಾರರ ಮೇಲೆ ಮಾತ್ರವೇ ಅವಲಂಬಿತವಾಗಿರುತ್ತದೆಂಬ ಸಾಮಾನ್ಯ ಜ್ಞಾನವೂ ಇಲ್ಲದೆ ಸ್ವಕಲ್ಪಿತ ಶಾಸ್ತ್ರಗಳ ಮೊರೆಹೋಗಿ ಮುಗ್ಧ ಜೀವಿಗಳ ಮಾರಣಹೋಮ ನಡೆಸಲು ನಿರ್ಧರಿಸುವುದು ಜರ್ಮನಿಯಂತಹ ಪ್ರಗತಿಪರ ದೇಶದಲ್ಲೂ ಇಂಥಾ ಬೂಟಾಟಿಕೆಗಳು ನಡೆಯುತ್ತವೆಂಬುದಕ್ಕೆ ಸಾಕ್ಷಿಯಾಗಿದೆ.
ಬಹುಶಃ ಆಕ್ಟೋಪಸ್ನ ಮೈಮಾಟ ಯಾರದೋ ಬಾಯಲ್ಲಿ ನೀರೂರಿಸಿತ್ತು ಎಂದು ಕಾಣುತ್ತದೆ, ಆ ವ್ಯಕ್ತಿ ಇಂತಹ ಷಡ್ಯಂತ್ರ ಹೂಡಿ ಭಕ್ಷಣೆಗಾಗಿ ಸರ್ವಸಿದ್ಧತೆ ನಡೆಸಿರಬೇಕು. ಅಂತೂ ಬಹು ನಿರೀಕ್ಷಿತ ಜರ್ಮನ್ ತಂಡ ಸೋತು ಮನೆಗೆ ಮರಳುವ ಹಾದಿಯಲ್ಲಿದೆ, ಇದೇ ಕುಂಟು ನೆಪ ಹೇಳಿ ಪಾಲ್ನನ್ನು ನೀರಿನಿಂದ ಹೊರಗೆಳೆಯದಿದ್ದರೆ ಸಾಕು.

Friday, July 9, 2010


ಪ್ರೀತಿ
ಮನಗಳ ಮಧುರ ಮಿಲನ "ಪ್ರೀತಿ", ಜೀವನವೇ "ಪ್ರೀತಿ", ಬಾಂಧವ್ಯದ ಬೆಸುಗೆ "ಪ್ರೀತಿ", ಮನಸಲ್ಲಿ
ಮೂಡಿ ಕಣ್ಣಲ್ಲಿ ಅರಳೋದು "ಪ್ರೀತಿ"....ಹೀಗೇ ಎಷ್ಟು ಪದಗಳಲ್ಲಿ ಹೇಳಿದರೂ ಮುಗಿಯದಂತದ್ದು ಸಾಗರಕ್ಕೂ ಮಿಗಿಲಾದದ್ದು ಈ
"ಪ್ರೀತಿ".
"ಪ್ರೀತಿ" ಅನ್ನೋ ಪದ ಕೇಳುತ್ತಿದ್ದಂತೆ ಮನಸ್ಸಿನಲ್ಲಿ ಅದೆಂತದೋ ಭಾವನೆ ಉಮ್ಮಳಿಸಿ ಬರುತ್ತದೆ,
ಏನೋ ಆನಂದ, ಏನೋ ಪಡೆದಂತ ತೃಪ್ತಿ. ಅಂದರೆ ಈ ಪ್ರೀತಿಗೆ ಅಷ್ಟೊಂದು ಶಕ್ತಿಯಿದೆಯಾ...?! ಹೌದೂ, ಈ ಇಡೀ ಜಗತ್ತಿನ ಜೀವಕೋಟಿಗಳು ಬದುಕಿರೋದಕ್ಕೆ, ಬೆಳೆದು ಮುನ್ನಡೆಯೋದಕ್ಕೆ ಆಧಾರವೇ "ಪ್ರೀತಿ". ಸಣ್ಣ ಮೀನಿನಿಂದ ಹಿಡಿದೂ ಮಾನವನವರೆಗೂ ತನ್ನ ಹುಟ್ಟಿನೊಂದಿಗೇ ಪ್ರೀತಿಯ ಆರೈಕೆ ತಾಯಿಯಿಂದ ಮೊದಲಾಗಿ, ಬೆಳೆಯುತ್ತಾ ಸುತ್ತಮುತ್ತಲಿನವರ ಹಾರೈಕೆಯ ಪ್ರೀತಿ, ಸ್ನೇಹಿತರ-
ಸಹಪಾಠಿಗಳ, ಅಣ್ಣ-ಅಕ್ಕ-ತಂಗಿಯರ ಅಕ್ಕರೆಯ ಪ್ರೀತಿ. ಮುಂದೇ ಸಂಗಾತಿಯ ಪ್ರೀತಿ, ಮಕ್ಕಳ ಪ್ರೀತೀ...ಹಾಗೆ ನೋಡಿದರೆ ಪ್ರೀತಿಗೆ "ಆದಿಯೂ ಇಲ್ಲಾ ಅಂತ್ಯವೂ ಇಲ್ಲಾ". ನನ್ನ ಯುವ ಸ್ನೇಹಿತರು ಇದನ್ನು ಗ್ರಹಿಸುವುದಲ್ಲಿ, ಅರ್ಥ ಮಾಡಿಕೊಳ್ಳುವುದರಲ್ಲಿ ಎಡವಿದ್ದಾರಾ?..ಹಾದಿತಪ್ಪಿದ್ದಾರಾ?.. ಅಥವಾ ಈ ಸೂಕ್ಷ್ಮ ಶಕ್ತಿಯ ತಿಳಿಯೋ ಗೋಜಿಗೇ ಹೋಗಿಲ್ಲವಾ?...ನೀವೇ ಇದಕ್ಕೆಲ್ಲಾ ಉತ್ತರ ಹುಡುಕಿಕೊಳ್ಳಬೇಕು. ಒಬ್ಬ ವಿವೇಕಿ ಹೇಳೋ ಹಾಗೆ "ನಾವು ಜಗತ್ತಿನ ಎಲ್ಲರನ್ನೂ ಎಲ್ಲಿಯವರೆಗೆ ಪ್ರೀತಿಸೋದನ್ನ ಕಲಿಯೋದಿಲ್ಲವೋ, ಅಲ್ಲಿಯವರೆಗೂ ಒಬ್ಬ ವ್ಯಕ್ತಿಯನ್ನು ಖಂಡಿತವಾಗಿಯೂ ಪ್ರೀತಿಸಲಾರೆವೂ....". ಈ ಮಾತಿನ ಅರ್ಥ ಎಲ್ಲರನ್ನೂ ಒಗ್ಗೂಡಿಸುವ, ಸಂಬಂಧವ ಗಟ್ಟಿಗೊಳಿಸುವ ಆಂತರ್ಯ ಈ ಪ್ರೀತಿಗಿದೆ ಎಂಬುದು.
ಹತ್ತಾರು ವರ್ಷಗಳು ಜೊತೆಗಿದ್ದರೂ ಉಸಿರೆತ್ತದ ಪ್ರೀತಿ ಒಂದೇ ನೋಟದಲ್ಲಿ ಒಡಮೂಡುತ್ತದೆಂಬುದು ಹಾಸ್ಯಾಸ್ಪದವಾಗಿ ಕಂಡರೂ, ಕೆಲವು ಸಂದರ್ಭಗಳಲ್ಲಿ ಪ್ರೀತಿಯ 'ಫ್ರೀಕ್ವೆನ್ಸಿ ಮ್ಯಾಚ್' ಆಗಿ ಜೊತೆಗೂಡಿರೋ ಉದಾಹರಣೆಗಳು ಸಾಕಷ್ಟು. ಮನಸ್ಸನ್ನು ಅರ್ಥ ಮಾಡಿಕೊಳ್ಳೋ ಮನಸ್ಸು ಸಿಗದೆ "ಮಿಸ್ಮ್ಯಾಚಾಗಿ" ಪ್ರೀತಿಯ ಸಾಗರದಲ್ಲಿ ಮರೆಯಾದವರು ಅದೆಷ್ಟೋ ಮಂದಿ. ನಿಮ್ಮೆಲ್ಲರಿಗೂ ಮುಖ್ಯವಾಗಿ ಹೇಳಲೇ ಬೇಕಾದದ್ದು ಮುಖದ ವಿಷಯ, ಮುಖಾ ನೋಡಿ ಮನಸ್ಸು ಅರ್ಥವಾಯ್ತು ಅನ್ನೋದು ಮಾಯಾಜಾಲವಷ್ಟೇ. ವಾಸ್ತವದಲ್ಲಿ ಎರಡಕ್ಕೂ ಭೂಮಿ-ಆಕಾಶದಷ್ಟು ಅಂತರವಿರಬಹುದು. ಬಾಹ್ಯ ಸೌಂದರ್ಯದ ಆಕರ್ಷಣೆಯಿಂದ ಮೋಹಿತರಾಗಿ ಹೃದಯಗಳು ಬದಲಾಗಿವೆ ಅನ್ನೋದು ಪ್ರೀತಿಗೆ ಸಮಾಧಿಕಟ್ಟಿದ ಹಾಗೆ, ನಿಜವಾದ ಪ್ರೀತಿಗೆ ಹಲವು ಸಲ ಸಂಯಮ ಅಗತ್ಯವೆಂದು ತೋರುತ್ತದೆ. ಒಟ್ಟಿನಲ್ಲಿ ಯುವ ಮನಸ್ಸುಗಳೇ ಈ ಪ್ರೀತಿ ಜಗತ್ತಿಗೇ ಬೆಳಕು ಕೊಡೋ ಸೂರ್ಯನ ಶಕ್ತಿಗೆ ಸಮನಾದದ್ದು, ಈ ಭಾವದಲ್ಲಿ ಮುಳುಗಿ ಮರೆಯಾಗೋದಕ್ಕಿಂತ ಇದರಿಂದಲೇ ಜೀವನದಲ್ಲಿ ಮೇಲೇಳೋ ಚಾಪನ್ನು ಮೂಡಿಸಿ, ಸಾಧನೆಗಿದೇ ಸ್ಫೂರ್ತಿಯಾಗಲಿ, ವರ್ಷದಲ್ಲಿ ಮಾಡೋ ಕೆಲಸ ವಾರದಲ್ಲಿ ಮುಗಿಸೋ ತಾಕತ್ತನ್ನು ಈ ಪ್ರೀತಿಯಿಂದ ಬೆಳಸಿ.
ಕೊನೇ ಮಾತೂ....
ಕೆಂಪು ರಕ್ತ ಕ್ರೂರತೆಗೆ ಸಾಕ್ಷಿ,
ಕೆಂಪು ಹೂ ಪ್ರೀತಿಗೆ ಸಾಕ್ಷಿ........."ಕ್ರೂರತೆ ಅಳಿಸಿ, ಪ್ರೀತೀನ ಬೆಳಸಿ".



;;