ಮೈಸೂರು ಮಹಾರಾಜರ ಬಿಡಾರವಾಗಿದ್ದ `ಬಿಡದಿ' ನನ್ನೂರು. ಚೆಡ್ಡಿಯ ವಯಸ್ಸು ಮುಗಿಯುವವರೆಗೂ ಓದಿದ್ದು ನಮ್ಮೂರಲ್ಲೇ. ಮುಂದಿನ ಎಂಟು ವರ್ಷದ ನಂಟು ಬಸವನಗುಡಿಯ ನ್ಯಾಷನಲ್ ಕಾಲೇಜಿನ ಜೊತೆಗೆ. ಬಿಎಸ್ಸಿ ಪದವಿ ಪಡೆದು ಬೆಂಗಳೂರು ವಿವಿಯ ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಎಂಎಸ್ಸಿ ಅಭ್ಯಾಸ ಮಾಡುತ್ತಿರುವ ನನಗೆ ಜಾಸ್ತೀನೆ ನಾಟಕಗಳ ಹುಚ್ಚು, ಬರೆಯುವ ಚಟ, ಓದೋ ಗೀಳು, ಓಡಾಡೋ ಹುಮ್ಮಸ್ಸು ಇರೋದು ನಿಜ. ಇದೀಗ ಡಾಕ್ಯುಮೆಂಟರಿ ಬಗೆಗೆ ಒಲವು ಹೆಚ್ಚಾಗಿ, ಹುಚ್ಚಾಗಿದೆ.
ಸ್ವಾತಂತ್ರ್ಯ ಒಬ್ಬೊಬ್ಬರಿಗೆ ಒಂದೊಂದು ರೀತಿ....ಮಕ್ಕಳಿಗೆ, ಚಾಕೊಲೆಟ್ ಸಿಗುತ್ತೆ ಅನ್ನೋ ಆಸೆಯಿಂದಲೇ ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದಾರೆ. ದೇಶ ಸ್ವಾತಂತ್ರ್ಯಗಳಿಸಿ ೬೪ ವರ್ಷಗಳು ಕಳೆದಿದ್ದರು ಈ ಸ್ವಾತಂತ್ರ್ಯ, ಪ್ರಜಾಪ್ರಭುತ್ವದ ಅರ್ಥವನ್ನು ಸರಿಯಾಗಿ ತಿಳಿದವರಿಲ್ಲ.....ಮುಂದೆ ಅದನ್ನು ಈ ಮಕ್ಕಳಾದರು ಅರ್ಥೈಸಬಹುದು.